ಹಣತೆ ಮತ್ತು ಎಣ್ಣೆ ಹಿಡಿದು ಮಾರಾಟಕ್ಕೆ ನಿಂತವರಲ್ಲಿ, ಭಕ್ತರು ಯಾವ ಚೌಕಾಶಿಯೂ ಮಾಡದೆ ಖರೀದಿಸಿ, ದೀಪ ಹಚ್ಚಿದರು. ಕೆಲವರು ಮನೆಯಿಂದಲೇ ಹಣತೆ, ಎಣ್ಣೆ ತಂದು ದೀಪ ಹಚ್ಚಿದರು. ಮತ್ತೆ ಕೆಲವರು ಸಿಕ್ಕಜಾಗದಲ್ಲಿಯೇ ರಂಗೋಲಿ ಬಿಡಿಸಿ ದೀಪ ಬೆಳಗಿದರು. ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ಬೆಳಗಾವಿ, ವಿಜಯಪುರ, ಕಲಬುರ್ಗಿ, ಉತ್ತರಕನ್ನಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಯ ಭಕ್ತರು ಬಂದು, ದೀಪ ಹಚ್ಚಿ ಹರಕೆ ತೀರಿಸಿದರು. ಧಾರವಾಡ, ಹುಬ್ಬಳ್ಳಿ ಭಾಗದ ಭಕ್ತರು ಮುಸ್ಸಂಜೆ ಆರಕ್ಕೇ ಬಂದು ಮಠದ ಆವರಣದಲ್ಲಿ ದೀಪ ಹಚ್ಚಿದು. ಯುವಕ, ಯುವತಿಯರು ಹಚ್ಚಿದ ದೀಪದ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು.ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಎನ್ಸಿಸಿ ಕೆಡಿಟ್ಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ್ದರು.