<p>ಹುಬ್ಬಳ್ಳಿ: ಪ್ರೊ. ಚಂದ್ರಶೇಖರ ಪಾಟೀಲ ಸೇರಿದಂತೆ ಕನ್ನಡಪರ ಹೋರಾಟಗಾರರ ಹಾಗೂ ಸಾಹಿತಿಗಳ ಪುತ್ಥಳಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸ್ಥಾಪಿಸಲಿ ಎಂದು ಚಿಂತನ ವೇದಿಕೆಯ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.</p>.<p>ಉಣಕಲ್ನ ಶಿವಗಿರಿಯಲ್ಲಿ ಸೋಮವಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹಾಗೂ ಚಿಂತನ ವೇದಿಕೆ ವತಿಯಿಂದ ಚಂದ್ರಶೇಖರ ಪಾಟೀಲ ಅವರ ನಿಧನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಹಾಗೂ ಪ್ರೊ. ಚಂದ್ರಶೇಖರ ಪಾಟೀಲ ಅವರ ನಿಧನ ಕನ್ನಡ ನಾಡಿಗೆ ನಷ್ಟವುಂಟುಮಾಡಿದೆ. ಕನ್ನಡ ನಾಡು ನುಡಿ ವಿಚಾರದಲ್ಲಿ ದುಡಿದು ಮಡಿದ ಕವಿ, ಕಲಾವಿದರಿಗೆ ಗೌರವ ನೀಡುವ ಕಾರ್ಯ ನಡೆಯಬೇಕಿದೆ ಎಂದರು.</p>.<p>ಚನ್ನಬಸಪ್ಪ ಧಾರವಾಡಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಅನಂತ ಕುಲಕರ್ಣಿ, ಎಸ್.ಐ. ನೇಕಾರ, ಆರ್.ಎಸ್. ವೈದ್ಯ, ಪದ್ಮಜಾ ಉಮರ್ಜಿ, ರಾಮಚಂದ್ರ ಪೂಜಾರ, ಶಶಿಧರ ವಿರಕ್ತಮಠ ಇದ್ದರು.</p>.<p><strong>ಹುಬ್ಬಳ್ಳಿ ವಕೀಲರ ಸಂಘ:</strong> ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ, ನಿವೃತ್ತ ನ್ಯಾಯಮೂರ್ತಿ ಎಂ.ಎಂ. ಮಿರಧೆ, ವಕೀಲ ಆರ್.ಆರ್. ಮೀರಖಾನ್ ಅವರ ನಿಧನಕ್ಕೆ ಹುಬ್ಬಳ್ಳಿ ವಕೀಲರ ಸಂಘ ಹೊಸೂರು ಕೋರ್ಟ್ನ ವಕೀಲರ ಭವನದಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಸಿತು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ, ಚಂದ್ರಶೇಖರ ಪಾಟೀಲರ ಬರಹ, ಬದುಕು ಕುರಿತು ಮಾತನಾಡಿದರು. ವಕೀಲರಾದ ಡಿ.ಎಂ. ನರಗುಂದ, ಎ.ಸಿ. ನವಲೂರ, ಪಿ.ಎಸ್. ನರೇಗಲ್ಲ ಹಾಗೂ ಐ.ಕೆ. ಬೆಳಗಲಿ ನುಡಿನಮನ ಸಲ್ಲಿಸಿದರು.</p>.<p>ಸಂಘದ ಪದಾಧಿಕಾರಿಗಳಾದ ಅಶೊಕ ಅಣ್ವೇಕರ, ಎಸ್.ಜಿ. ಅರಗಂಜಿ, ಜೆ.ಎಫ್. ಹಿರೇಗೌಡರ, ಲೋಕೇಶ ಕೆ.ಎಂ., ಸುನಿತಾ ಪಿಳ್ಳೆ, ಎಸ್.ವೈ. ದುಂಡರಡ್ಡಿ, ಎಂ.ಎಂ. ಹಳ್ಳಿ, ವಿವೇಕ ನೀಲಿ, ಎಸ್.ಎಂ. ಹೂಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಪ್ರೊ. ಚಂದ್ರಶೇಖರ ಪಾಟೀಲ ಸೇರಿದಂತೆ ಕನ್ನಡಪರ ಹೋರಾಟಗಾರರ ಹಾಗೂ ಸಾಹಿತಿಗಳ ಪುತ್ಥಳಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸ್ಥಾಪಿಸಲಿ ಎಂದು ಚಿಂತನ ವೇದಿಕೆಯ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.</p>.<p>ಉಣಕಲ್ನ ಶಿವಗಿರಿಯಲ್ಲಿ ಸೋಮವಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹಾಗೂ ಚಿಂತನ ವೇದಿಕೆ ವತಿಯಿಂದ ಚಂದ್ರಶೇಖರ ಪಾಟೀಲ ಅವರ ನಿಧನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಹಾಗೂ ಪ್ರೊ. ಚಂದ್ರಶೇಖರ ಪಾಟೀಲ ಅವರ ನಿಧನ ಕನ್ನಡ ನಾಡಿಗೆ ನಷ್ಟವುಂಟುಮಾಡಿದೆ. ಕನ್ನಡ ನಾಡು ನುಡಿ ವಿಚಾರದಲ್ಲಿ ದುಡಿದು ಮಡಿದ ಕವಿ, ಕಲಾವಿದರಿಗೆ ಗೌರವ ನೀಡುವ ಕಾರ್ಯ ನಡೆಯಬೇಕಿದೆ ಎಂದರು.</p>.<p>ಚನ್ನಬಸಪ್ಪ ಧಾರವಾಡಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಅನಂತ ಕುಲಕರ್ಣಿ, ಎಸ್.ಐ. ನೇಕಾರ, ಆರ್.ಎಸ್. ವೈದ್ಯ, ಪದ್ಮಜಾ ಉಮರ್ಜಿ, ರಾಮಚಂದ್ರ ಪೂಜಾರ, ಶಶಿಧರ ವಿರಕ್ತಮಠ ಇದ್ದರು.</p>.<p><strong>ಹುಬ್ಬಳ್ಳಿ ವಕೀಲರ ಸಂಘ:</strong> ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ, ನಿವೃತ್ತ ನ್ಯಾಯಮೂರ್ತಿ ಎಂ.ಎಂ. ಮಿರಧೆ, ವಕೀಲ ಆರ್.ಆರ್. ಮೀರಖಾನ್ ಅವರ ನಿಧನಕ್ಕೆ ಹುಬ್ಬಳ್ಳಿ ವಕೀಲರ ಸಂಘ ಹೊಸೂರು ಕೋರ್ಟ್ನ ವಕೀಲರ ಭವನದಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಸಿತು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ, ಚಂದ್ರಶೇಖರ ಪಾಟೀಲರ ಬರಹ, ಬದುಕು ಕುರಿತು ಮಾತನಾಡಿದರು. ವಕೀಲರಾದ ಡಿ.ಎಂ. ನರಗುಂದ, ಎ.ಸಿ. ನವಲೂರ, ಪಿ.ಎಸ್. ನರೇಗಲ್ಲ ಹಾಗೂ ಐ.ಕೆ. ಬೆಳಗಲಿ ನುಡಿನಮನ ಸಲ್ಲಿಸಿದರು.</p>.<p>ಸಂಘದ ಪದಾಧಿಕಾರಿಗಳಾದ ಅಶೊಕ ಅಣ್ವೇಕರ, ಎಸ್.ಜಿ. ಅರಗಂಜಿ, ಜೆ.ಎಫ್. ಹಿರೇಗೌಡರ, ಲೋಕೇಶ ಕೆ.ಎಂ., ಸುನಿತಾ ಪಿಳ್ಳೆ, ಎಸ್.ವೈ. ದುಂಡರಡ್ಡಿ, ಎಂ.ಎಂ. ಹಳ್ಳಿ, ವಿವೇಕ ನೀಲಿ, ಎಸ್.ಎಂ. ಹೂಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>