<p><strong>ಹುಬ್ಬಳ್ಳಿ</strong>: ‘ಎಲ್ಲರನ್ನೂ ಒಂದುಗೂಡಿಸಲು ನೇತೃತ್ವ ವಹಿಸಿಕೊಂಡಿರುವೆ. ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ. ಕಾಲವೇ ಹಂತಹಂತವಾಗಿ ಎಲ್ಲರನ್ನೂ ಒಂದುಗೂಡಿಸುತ್ತದೆ’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.</p>.<p>ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಪಂಚ ಪೀಠಾಧಿಪತಿಗಳು ಮತ್ತು ಲಿಂಗಾಯತ ಧರ್ಮ ಪ್ರತಿಪಾದಕರು ಬದಲಾಗಬೇಕು ಎಂಬುದು ನಮ್ಮ ನಿಲುವು’ ಎಂದರು.</p>.<p>‘ಬಾಳೆಹೊನ್ನೂರಿನ ರಂಭಾಪುರಿ ಮಠದ ಶ್ರೀಗಳು ಇದೇ ಮೊದಲಿಗೆ ತಮ್ಮ ದಸರಾ ದರ್ಬಾರ್ನಲ್ಲಿ ಬಸವಣ್ಣ ಅವರ ಚಿತ್ರ ಇರಿಸಿಕೊಂಡಿದ್ದಾರೆ. ಇದು ಮೊದಲ ಬದಲಾವಣೆ. ದಿನ ಕಳೆದಂತೆ ಬಸವಣ್ಣ, ರೇಣುಕಾಚಾರ್ಯರ ಭಕ್ತರು ಒಂದಾಗುತ್ತಾರೆ. ಪಂಚಪೀಠಗಳು, ವೀರಕ್ತ ಪೀಠಗಳೂ ಒಂದಾಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p><strong>ಸಮಾವೇಶದ ತಯಾರಿ:</strong> ಸೆ.19ರಂದು ಹುಬ್ಬಳ್ಳಿಯಲ್ಲಿ ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ ನಡೆಯಲಿದೆ. ದಿಂಗಾಲೇಶ್ವರ ಸ್ವಾಮೀಜಿ ಮತ್ತು ಅಖಿಲ ಭಾರತೀಯ ವೀರಶೈವ ಮಹಾಸಭಾದಿಂದ ಪೂರ್ವಸಿದ್ಧತೆ ನಡೆದಿದೆ. ಸಮಾವೇಶದಲ್ಲಿ ವಿವಿಧೆಡೆಯಿಂದ ಸಾವಿರಾರು ಜನರು ಹಾಗೂ ವಿವಿಧ ಮಠಾಧೀಶರು ಪಾಲ್ಗೊಳ್ಳುವರು’ ಎಂದರು.</p>.<p><strong>ಒಗ್ಗಟ್ಟಿಗಾಗಿ ಸಮಾವೇಶ: ಖಂಡ್ರೆ</strong></p><p><strong>ಹುಬ್ಬಳ್ಳಿ:</strong> ‘ಸಮಾಜ ಒಗ್ಗೂಡಿಸಲು ಹುಬ್ಬಳ್ಳಿಯಲ್ಲಿ ಸೆ.19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ಏರ್ಪಡಿಸಲಾಗಿದೆ. ಯಾರ ವಿರೋಧಕ್ಕೋ ಪರ್ಯಾಯ ಕಂಡುಕೊಳ್ಳಲು ಅಲ್ಲ’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.</p><p> ‘ಸಮಾಜದಲ್ಲಿ ವೀರಶೈವ ಲಿಂಗಾಯತರು ಸ್ವಾಭಿಮಾನಿಗಳು ಸ್ವಾವಲಂಬಿ ಮತ್ತು ಬಲಾಢ್ಯರಾಗಿ ಬದುಕಬೇಕು. ಸಮಾಜದ ಇತರೆ ಎಲ್ಲರೂ ಬೆಳೆಯಲು ಇದರಿಂದ ಸಾಧ್ಯ’ ಎಂದು ಸೋಮವಾರ ಅವರು ಅಭಿಪ್ರಾಯಪಟ್ಟರು. ‘ಸಮಾಜದ ವಿಷಯದಲ್ಲಿ ಅನಗತ್ಯ ಗೊಂದಲ ಮೂಡಿಸಬಾರದು. ವಿಚಾರವಂತರು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಎಲ್ಲರನ್ನೂ ಒಂದುಗೂಡಿಸಲು ನೇತೃತ್ವ ವಹಿಸಿಕೊಂಡಿರುವೆ. ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ. ಕಾಲವೇ ಹಂತಹಂತವಾಗಿ ಎಲ್ಲರನ್ನೂ ಒಂದುಗೂಡಿಸುತ್ತದೆ’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.</p>.<p>ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಪಂಚ ಪೀಠಾಧಿಪತಿಗಳು ಮತ್ತು ಲಿಂಗಾಯತ ಧರ್ಮ ಪ್ರತಿಪಾದಕರು ಬದಲಾಗಬೇಕು ಎಂಬುದು ನಮ್ಮ ನಿಲುವು’ ಎಂದರು.</p>.<p>‘ಬಾಳೆಹೊನ್ನೂರಿನ ರಂಭಾಪುರಿ ಮಠದ ಶ್ರೀಗಳು ಇದೇ ಮೊದಲಿಗೆ ತಮ್ಮ ದಸರಾ ದರ್ಬಾರ್ನಲ್ಲಿ ಬಸವಣ್ಣ ಅವರ ಚಿತ್ರ ಇರಿಸಿಕೊಂಡಿದ್ದಾರೆ. ಇದು ಮೊದಲ ಬದಲಾವಣೆ. ದಿನ ಕಳೆದಂತೆ ಬಸವಣ್ಣ, ರೇಣುಕಾಚಾರ್ಯರ ಭಕ್ತರು ಒಂದಾಗುತ್ತಾರೆ. ಪಂಚಪೀಠಗಳು, ವೀರಕ್ತ ಪೀಠಗಳೂ ಒಂದಾಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p><strong>ಸಮಾವೇಶದ ತಯಾರಿ:</strong> ಸೆ.19ರಂದು ಹುಬ್ಬಳ್ಳಿಯಲ್ಲಿ ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ ನಡೆಯಲಿದೆ. ದಿಂಗಾಲೇಶ್ವರ ಸ್ವಾಮೀಜಿ ಮತ್ತು ಅಖಿಲ ಭಾರತೀಯ ವೀರಶೈವ ಮಹಾಸಭಾದಿಂದ ಪೂರ್ವಸಿದ್ಧತೆ ನಡೆದಿದೆ. ಸಮಾವೇಶದಲ್ಲಿ ವಿವಿಧೆಡೆಯಿಂದ ಸಾವಿರಾರು ಜನರು ಹಾಗೂ ವಿವಿಧ ಮಠಾಧೀಶರು ಪಾಲ್ಗೊಳ್ಳುವರು’ ಎಂದರು.</p>.<p><strong>ಒಗ್ಗಟ್ಟಿಗಾಗಿ ಸಮಾವೇಶ: ಖಂಡ್ರೆ</strong></p><p><strong>ಹುಬ್ಬಳ್ಳಿ:</strong> ‘ಸಮಾಜ ಒಗ್ಗೂಡಿಸಲು ಹುಬ್ಬಳ್ಳಿಯಲ್ಲಿ ಸೆ.19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ಏರ್ಪಡಿಸಲಾಗಿದೆ. ಯಾರ ವಿರೋಧಕ್ಕೋ ಪರ್ಯಾಯ ಕಂಡುಕೊಳ್ಳಲು ಅಲ್ಲ’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.</p><p> ‘ಸಮಾಜದಲ್ಲಿ ವೀರಶೈವ ಲಿಂಗಾಯತರು ಸ್ವಾಭಿಮಾನಿಗಳು ಸ್ವಾವಲಂಬಿ ಮತ್ತು ಬಲಾಢ್ಯರಾಗಿ ಬದುಕಬೇಕು. ಸಮಾಜದ ಇತರೆ ಎಲ್ಲರೂ ಬೆಳೆಯಲು ಇದರಿಂದ ಸಾಧ್ಯ’ ಎಂದು ಸೋಮವಾರ ಅವರು ಅಭಿಪ್ರಾಯಪಟ್ಟರು. ‘ಸಮಾಜದ ವಿಷಯದಲ್ಲಿ ಅನಗತ್ಯ ಗೊಂದಲ ಮೂಡಿಸಬಾರದು. ವಿಚಾರವಂತರು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>