ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹದಾಯಿ ಯೋಜನೆ ಕುರಿತು ಕಾಂಗ್ರೆಸ್ಗೆ ಸಮಾವೇಶ ಮತ್ತು ಪ್ರತಿಭಟನೆ ನಡೆಸಲು ಯಾವ ನೈತಿಕತೆಯೂ ಇಲ್ಲ. ಅಧಿಕಾರದಲ್ಲಿದ್ದಾಗ ಏನೂ ಮಾಡದ ಅವರು, ಇದೀಗ ಯೋಜನೆಯ ಅಂತಿಮ ಸ್ವರೂಪ ಸಿದ್ಧವಾಗುತ್ತಿದ್ದಂತೆ ಹೋರಾಟಕ್ಕೆ ಮುಂದಾಗಿದ್ದಾರೆ. ಸಿದ್ಧವಾದ ಅಡುಗೆಗೆ ಒಗ್ಗರಣೆ ನೀಡುವ ಸಂದರ್ಭದಲ್ಲಿ ಬಂದು, ತಾವೇ ಅಡುಗೆ ಮಾಡಿದ್ದು ಎಂದು ಹೇಳಲು ಅವರು ಮುಂದಾಗುತ್ತಿದ್ದಾರೆ. ಅವರಿಗೆ ರಾಜಕೀಯ ಮಾಡಿ ಗೊತ್ತೇ ವಿನಃ, ಕೆಲಸ ಮಾಡಿ ಗೊತ್ತಿಲ್ಲ’ ಎಂದು ಟೀಕಿಸಿದರು.