ಹುಬ್ಬಳ್ಳಿ: ಆನಂದ ಅಸೋಸಿಯೇಟ್ಸ್ ಸರ್ವಧರ್ಮಗಳ ವಧು-ವರರ ಮಾಹಿತಿ ಸೇವಾ ಕೇಂದ್ರವು ಮೇ 28ರಂದು ಸರ್ವಧರ್ಮ ವಧು-ವರರ ಹಾಗೂ ಪಾಲಕರ ಸಮಾವೇಶವನ್ನು ಧಾರವಾಡದ ಸರಸ್ವತಿ ನಿಕೇತನ ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಎದುರಿಗೆ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ ಕುಪ್ಪಸಗೌಡರ ಹೇಳಿದರು.
ಸಮಾವೇಶದಲ್ಲಿ ಜಂಗಮ, ಲಿಂಗಾಯತ, ಪಂಚಮಸಾಲಿ, ಬಣಜಿಗ, ಬಣಗಾರ, ಶಿವಶಿಂಪಿ, ನೇಕಾರ, ಗಾಣಿಗೇರ, ಮರಾಠ, ಜೈನ, ಬ್ರಾಹ್ಮಣ, ಮಾದರ, ವಾಲ್ಮೀಕಿ, ಗೊಲ್ಲರ ಸೇರಿದಂತೆ ಎಲ್ಲ ಒಳಪಂಗಡದವರು, ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ನೌಕರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂತರ್ಜಾತಿ ವಿವಾಹ ಅಪೇಕ್ಷಿತರು, ಮರು ವಿವಾಹ ಬಯಸುವ ವಿಚ್ಛೇದಿತ ಪತಿ-ಪತ್ನಿ, ವಿಧುರ-ವಿಧವೆಯರು ಸಹ ಸಮಾವೇಶದಲ್ಲಿ ಪಾಲ್ಗೊಳ್ಳಬಹುದಾಗಿದೆ. ಮಾಹಿತಿಗಾಗಿ ಮೊ: 9343402308, 9611142568 ಸಂಪರ್ಕಿಸಬಹುದು ಎಂದರು.