ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುರಂದರದಾಸರ ಬದುಕು ದಾರಿದೀಪವಾಗಲಿ’:ಗಣಪತಿ ಗಂಗೊಳ್ಳಿ

ಸಂಯುತಾ ಪ್ರತಿಷ್ಠಾನದಿಂದ ಪುರಂದರೋತ್ಸವ ಕಾರ್ಯಕ್ರಮ
Last Updated 22 ಜನವರಿ 2023, 7:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪುರಂದರದಾಸರು ಸಂಗೀತ ಪಿತಾಮಹ. ಕೀರ್ತನೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿರುವ ಅವರ ಬದುಕು ಎಲ್ಲರಿಗೂ ದಾರಿದೀಪವಾಗಲಿ’ ಎಂದು ಸಂಯುತಾ ಪ್ರತಿಷ್ಠಾನದ ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲಾಮಂದಿರದಲ್ಲಿ ಸಂಯುತಾ ಪ್ರತಿಷ್ಠಾನ, ಆಚಾರ್ಯ ಸೇವಾ ಸಮಿತಿ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪುರಂದರೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಾಹ್ಮಣ ಸಮಾಜದ ಮುಖಂಡ ಎ.ಸಿ.ಗೋಪಾಲ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ ಅನನ್ಯ. ಕೀರ್ತನೆ, ಭಕ್ತಿ ಮಾರ್ಗದ ಮೂಲಕ ಸಮಾಜದಲ್ಲಿನ ಅಜ್ಞಾನ ಹೋಗಲಾಡಿಸಲು ಶ್ರಮಿಸಿದ್ದಾರೆ. ಹಣ, ಆಸ್ತಿಗಿಂತ ಧರ್ಮ ಮಾರ್ಗವೇ ಮೇಲು ಎನ್ನುವ ಮೂಲಕ, ಅದರಂತೆ ಬದುಕಿ ತೋರಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ’ ಎಂದು ಹೇಳಿದರು.

ಪಂಡಿತ ಪಾಂಡುರಂಗಾಚಾರ್ಯ ಹುನಗುಂದ ಮಾತನಾಡಿ, ಪುರಂದರದಾಸರು ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. ಇವು ಸನ್ಮಾರ್ಗದಲ್ಲಿ ನಡೆಯಲು ದಾರಿದೀಪವಾಗಿವೆ ಎಂದರು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎ.ಪಿ.ಐತಾಳ, ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮದನ್ ಕುಲಕರ್ಣಿ ಮಾತನಾಡಿದರು.

ದಿವಟೆಗಲ್ಲಿಯ ಜಿಹ್ವೇಶ್ವರ ಭಜನಾ ಮಂಡಳಿ, ದೇಶಪಾಂಡೆ ನಗರದ ಶ್ರೀಕೃಷ್ಣ ಭಜನಾ ಮಂಡಳಿ, ಉಣಕಲ್‌ನ ಪದ್ಮಜಾ ಭಜನಾ ಮಂಡಳಿ ಹಾಗೂ ಚಂದ್ರನಾಥ ನಗರದ ವೇಣುಪ್ರಿಯ ಭಜನಾ ಮಂಡಳಿ ಸದಸ್ಯರು ದಾಸ ನಮನ ಸಲ್ಲಿಸಿದರು.

ಸುಶೀಲೇಂದ್ರ ಬೆಳಗಲಿ ಕೀರ್ತನ ವ್ಯಾಖ್ಯಾನ ಮಾಡಿದರು. ಮನೋವೈದ್ಯ ಡಾ. ವಿನೋದ ಕುಲಕರ್ಣಿ ದಾಸ ಸಂಗೀತ ಪ್ರಸ್ತುತಪಡಿಸಿದರು. ಜನಮೇಜಯ ಉಮರ್ಜಿ, ಮನೋಹರ ಪರ್ವತಿ, ಮನೋಹರ ಜೋಶಿ, ಶುಭಾ ಭಟ್, ಎಸ್.ಎಸ್.ನಾಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT