ಕೊಠಡಿ ದುರಸ್ತಿಗೆ ಕ್ರಮ; ಬಿಇಒ
ಹುಬ್ಬಳ್ಳಿ: ‘ಶಾಲೆಯ ಕೊಠಡಿಯ ಗೋಡೆ ಒಡೆದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡ ಹೇಳಿದರು. ‘ಗೋಡೆ ಒಡೆದಿದ್ದಕ್ಕೆ ₹50 ಸಾವಿರ ನಷ್ಟವಾಗಿದೆ. ಬುಧವಾರದಿಂದಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಶಾಲೆಯ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’ ಎಂದರು. ‘ಕಟ್ಟಡವನ್ನು ಯಾವಾಗ ನಿರ್ಮಿಸಲಾಗಿದೆ ಎಂಬ ಬಗ್ಗೆಯೂ ದಾಖಲೆಗಳು ಇಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ 22 ಮಕ್ಕಳು ಓದುತ್ತಿದ್ದಾರೆ. ಒಂದು ಕೊಠಡಿಗೆ ಹಾನಿಯಾಗಿರುವುದರಿಂದ ಇನ್ನೊಂದು ಕೊಠಡಿಯಲ್ಲಿ ಮಂಗಳವಾರ ತರಗತಿ ನಡೆಸಲಾಗಿದೆ’ ಎಂದು ತಿಳಿಸಿದರು.