‘ಎಲ್ಲಾ ಇಲಾಖೆಗಳ ಅನುದಾನಗಳಿಗೆ ಕತ್ತರಿ ಹಾಕಲಾಗಿದ್ದು, ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆಯೆಂದು ಪದೇ ಪದೇ ಗಂಟಲು ಹರಿಯುವಂತೆ ಕೂಗುತ್ತಿದ್ದ ಇದೇ ಕುಮಾರಸ್ವಾಮಿ ಮತ್ತೆ ತೈಲದ ಮೇಲಿನ ತೆರಿಗೆ ಹೆಚ್ಚಿಸಿರುವುದಕ್ಕೆ ಅವರೇ ಉತ್ತರಿಸಬೇಕಿದೆ. ಕಳೆದ ಹನ್ನೊಂದು ದಿನಗಳಿಂದ ದೇಶದಲ್ಲಿ ನಿರಂತರ ಇಳಿಮುಖ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಈ ಬಜೆಟ್ಟಿನ ಅಧಿಕ ತೆರಿಗೆ ಪ್ರಸ್ತಾವನೆಯಿಂದ ಅದರ ಲಾಭ ರಾಜ್ಯದ ಜನರಿಗೆ ಸಿಗದಂತೆ ಮಾಡಿರುವುದು ಕುಮಾರಸ್ವಾಮಿ ಬಜೆಟ್ನ ವಿಶೇಷತೆ’ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.