ದಾವಣಗೆರೆಯ ಬಿ.ಜಿ.ಶಂಕರ ಪಾಟೀಲ ಅವರ ತಾಯಿ ಮೀನಾಕ್ಷಮ್ಮ ಅವರು ನವನಗರದಲ್ಲಿ ಸ್ಥಾಪಿಸಿದ ಮೈತ್ರಿ ವೃದ್ಧಾಶ್ರಮ ಸೇರುವ ಹಿರಿಯರ ಆರೈಕೆಗೆ ಇವರೇ ಸರಿಯಾದ ವ್ಯಕ್ತಿ ಎಂದು 2004ರಲ್ಲಿ ಮುಕ್ತುಂ ಸಾಬ್ ಅವರಿಗೆ ಮೇಲುಸ್ತುವಾರಿ ವಹಿಸಲಾಯಿತು. ಅಂದಿನಿಂದ ಇಂದಿನವರೆಗೂ 295 ವೃದ್ಧರ ಆರೈಕೆ ಇವರು ಮಾಡಿದ್ದಾರೆ. ಅವರ ಊಟ, ಆಟ, ಓದು, ಹರಟೆ, ಬೇಕು ಬೇಡಗಳು, ಚಿಕಿತ್ಸೆ, ಔಷಧ, ಆಸ್ಪತ್ರೆ ಹೀಗೆ ಪ್ರತಿಯೊಂದರಲ್ಲೂ ಅವರಿಗೆ ಮಗನಂತೆ ಆರೈಕೆ ಮಾಡಿದ್ದಾರೆ.