<p><strong>ಹುಬ್ಬಳ್ಳಿ: </strong>ನಗರದ ಶಿರೂರ ಪಾರ್ಕ್ ಪ್ರದೇಶದಲ್ಲಿ ಭಾನುವಾರ ನೀರಾ ಮಾರಾಟ ಮಳಿಗೆಯ ಉದ್ಘಾಟನೆ ನಡೆಯಲಿದೆ ಎಂದು ಮಲೆನಾಡು ನಟ್ಸ್ ಆ್ಯಂಡ್ ಸ್ಪೈಸ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮನೋಹರ ಮಸ್ಕಿ ತಿಳಿಸಿದರು.</p>.<p>ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 10.30ಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ‘ವಸಂತ ನೀರಾ ಸೆಂಟರ್’ ಉದ್ಘಾಟಿಸುವರು. ಧಾರವಾಡ ಜಿಲ್ಲೆಯಲ್ಲಿ ಇದು ಮೂರನೇ ಮಳಿಗೆಯಾಗಿದೆ. ರಾಜ್ಯದ 14ನೇಯದ್ದಾಗಿದೆ’ ಎಂದರು</p>.<p>‘240 ಎಂ.ಎಲ್ನಷ್ಟು ನೀರಾಗೆ ₹50 ದರವಿದೆ. 500 ಎಂ.ಎಲ್ನ ಬಾಟಲ್ಗೆ ₹120 ದರವಿದೆ’ ಎಂದರು.</p>.<p class="Subhead"><strong>ಆರೋಗ್ಯಕರ ಪೇಯ:</strong>‘ಔಷಧೀಯ ಗುಣಗಳನ್ನು ಹೊಂದಿರುವ ನೀರಾ ಆರೋಗ್ಯಕರ ಪೇಯವಾಗಿದೆ. ಆದರೆ, ಅದನ್ನು 4 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ತಾಪಮಾಣದಲ್ಲಿ ಶೇಖರಿಸಿಡಬೇಕು. ಇಲ್ಲದಿದ್ದರೆ, ಅದು ಹೆಂಡವಾಗಿ ಬದಲಾಗುತ್ತದೆ’ ಎಂದು ವಿವರಿಸಿದರು.</p>.<p>‘ತೆಂಗಿನ ಮರದ ಹೊಂಬಾಳೆಗೆ ಇನ್ಸುಲೇಟೆಡ್ ಐಸ್ಬಾಕ್ಸ್ ಅಳವಡಿಸಿ, ಕಡಿಮೆ ತಾಪಮಾನದಲ್ಲಿ ನೀರಾ ಸಂಗ್ರಹಿಸುತ್ತೇವೆ. ಅದನ್ನು ಶುದ್ಧೀಕರಿಸಿ ಗ್ರಾಹಕರಿಗೆ ಸರಬರಾಜು ಮಾಡಲಾಗುವುದು’ ಎಂದರು.</p>.<p><strong>ನೀರಾ ಐಸ್ಕ್ರೀಂಗೂ ಸಿದ್ಧತೆ:</strong>‘ಸದ್ಯ ನೀರಾ ಬೆಲ್ಲದ ಪುಡಿ ಲಭ್ಯವಿದ್ದು, ಪ್ರತಿ ಕೆ.ಜಿಗೆ ₹1 ಸಾವಿರ ದರವಿದೆ. ದೀಪಾವಳಿ ವೇಳೆಗೆ ಇದರ ದರವನ್ನು ₹800 ಇಳಿಸಲಾಗುವುದು’ ಎಂದರು.</p>.<p>‘ನೀರಾ ಐಸ್ಕ್ರೀಂ ತಯಾರಿಗೂ ಮಾತುಕತೆ ನಡೆಯುತ್ತಿದ್ದು, ಮುಂದಿನ ಬೇಸಿಗೆ ಹೊತ್ತಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ’ ಎಂದರು.</p>.<p class="Subhead">ಧಾರವಾಡ ಸುಪ್ರೀಂ ನೀರಾ ಪಾರ್ಲರ್ನ ಮಹಾದೇವ ಅರಸಿದ್ಧ, ಹುಬ್ಬಳ್ಳಿಯ ವಸಂತ ನೀರಾ ಸೆಂಟರ್ನ ನಿಂಗರಾಜ ಬಿಳಿಎಲೆ ಹಾಗೂ ಪ್ರಕಾಶ ಅರಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ನಗರದ ಶಿರೂರ ಪಾರ್ಕ್ ಪ್ರದೇಶದಲ್ಲಿ ಭಾನುವಾರ ನೀರಾ ಮಾರಾಟ ಮಳಿಗೆಯ ಉದ್ಘಾಟನೆ ನಡೆಯಲಿದೆ ಎಂದು ಮಲೆನಾಡು ನಟ್ಸ್ ಆ್ಯಂಡ್ ಸ್ಪೈಸ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮನೋಹರ ಮಸ್ಕಿ ತಿಳಿಸಿದರು.</p>.<p>ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 10.30ಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ‘ವಸಂತ ನೀರಾ ಸೆಂಟರ್’ ಉದ್ಘಾಟಿಸುವರು. ಧಾರವಾಡ ಜಿಲ್ಲೆಯಲ್ಲಿ ಇದು ಮೂರನೇ ಮಳಿಗೆಯಾಗಿದೆ. ರಾಜ್ಯದ 14ನೇಯದ್ದಾಗಿದೆ’ ಎಂದರು</p>.<p>‘240 ಎಂ.ಎಲ್ನಷ್ಟು ನೀರಾಗೆ ₹50 ದರವಿದೆ. 500 ಎಂ.ಎಲ್ನ ಬಾಟಲ್ಗೆ ₹120 ದರವಿದೆ’ ಎಂದರು.</p>.<p class="Subhead"><strong>ಆರೋಗ್ಯಕರ ಪೇಯ:</strong>‘ಔಷಧೀಯ ಗುಣಗಳನ್ನು ಹೊಂದಿರುವ ನೀರಾ ಆರೋಗ್ಯಕರ ಪೇಯವಾಗಿದೆ. ಆದರೆ, ಅದನ್ನು 4 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ತಾಪಮಾಣದಲ್ಲಿ ಶೇಖರಿಸಿಡಬೇಕು. ಇಲ್ಲದಿದ್ದರೆ, ಅದು ಹೆಂಡವಾಗಿ ಬದಲಾಗುತ್ತದೆ’ ಎಂದು ವಿವರಿಸಿದರು.</p>.<p>‘ತೆಂಗಿನ ಮರದ ಹೊಂಬಾಳೆಗೆ ಇನ್ಸುಲೇಟೆಡ್ ಐಸ್ಬಾಕ್ಸ್ ಅಳವಡಿಸಿ, ಕಡಿಮೆ ತಾಪಮಾನದಲ್ಲಿ ನೀರಾ ಸಂಗ್ರಹಿಸುತ್ತೇವೆ. ಅದನ್ನು ಶುದ್ಧೀಕರಿಸಿ ಗ್ರಾಹಕರಿಗೆ ಸರಬರಾಜು ಮಾಡಲಾಗುವುದು’ ಎಂದರು.</p>.<p><strong>ನೀರಾ ಐಸ್ಕ್ರೀಂಗೂ ಸಿದ್ಧತೆ:</strong>‘ಸದ್ಯ ನೀರಾ ಬೆಲ್ಲದ ಪುಡಿ ಲಭ್ಯವಿದ್ದು, ಪ್ರತಿ ಕೆ.ಜಿಗೆ ₹1 ಸಾವಿರ ದರವಿದೆ. ದೀಪಾವಳಿ ವೇಳೆಗೆ ಇದರ ದರವನ್ನು ₹800 ಇಳಿಸಲಾಗುವುದು’ ಎಂದರು.</p>.<p>‘ನೀರಾ ಐಸ್ಕ್ರೀಂ ತಯಾರಿಗೂ ಮಾತುಕತೆ ನಡೆಯುತ್ತಿದ್ದು, ಮುಂದಿನ ಬೇಸಿಗೆ ಹೊತ್ತಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ’ ಎಂದರು.</p>.<p class="Subhead">ಧಾರವಾಡ ಸುಪ್ರೀಂ ನೀರಾ ಪಾರ್ಲರ್ನ ಮಹಾದೇವ ಅರಸಿದ್ಧ, ಹುಬ್ಬಳ್ಳಿಯ ವಸಂತ ನೀರಾ ಸೆಂಟರ್ನ ನಿಂಗರಾಜ ಬಿಳಿಎಲೆ ಹಾಗೂ ಪ್ರಕಾಶ ಅರಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>