ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಏನ್ಮಾಡಿದರೂ ನಡೆಯುತ್ತದೆ, ಜನ ಮತ ಹಾಕುತ್ತಾರೆ. ನಮಗಲ್ಲದಿದ್ದರೆ ಅವರಿಗೆ, ಅವರಿಗಲ್ಲದಿದ್ದರೆ ನಮಗೆ ಎನ್ನುವ ಭಾವನೆ ಇದೆ. ಇದನ್ನು ಹೋಗಲಾಡಿಸಬೇಕಾಗಿದೆ. ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಇನ್ನು ಮೇಲೆ ಪಕ್ಷ ನೋಡಬೇಡಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲವೂ ಒಂದೇ ರೀತಿಯಾಗಿವೆ. ಮೂರು ಪಕ್ಷದ ಬಹುತೇಕರು ಕಳ್ಳರಾಗಿದ್ದಾರೆ. ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ನಾಯಕರನ್ನು ನೋಡಿ ಮತ ಹಾಕಬೇಕು ಎಂದು ಕೋರಿದರು.