ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾದಾಮಿಯಲ್ಲಿ ನಡೆದ ಮರಣವೇ ಮಹಾನವಮಿ ಎಂಬ ಕಾರ್ಯಕ್ರಮದಲ್ಲಿ ಸಾಲ ಎಂಬುದು ಶೂಲ ಎಂದು ಎಲ್ಲರನ್ನೂ ಉದ್ದೇಶಿಸಿ ಹೇಳಿದ್ದೆ. ಅವು ಕಳಕಳಿಯ ಮಾತುಗಳಾಗಿದ್ದವು. ಆದರೆ ಕೆಲವು ಮಾಧ್ಯಮಗಳಲ್ಲಿ ಸ್ವಾಮೀಜಿ ಅವರು ರೈತರ ಸಾಲ ಮನ್ನಾವನ್ನು ಪರೋಕ್ಷವಾಗಿ ವಿರೋಧಿಸಿದರು ಎಂದು ಪ್ರಕಟವಾಗಿದೆ. ಆ ರೀತಿ ಹೇಳಿಯೇ ಇಲ್ಲ. ಹಾಗೂ ರೈತರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಅವರು ಹೇಳಿದರು.