ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಡಾ. ಗಿರಿಧರ ಕಜೆ ಮತ್ತು ಪತಂಜಲಿ ಸಂಸ್ಥೆ ಶೋಧಿಸಿದ ಔಷಧಿಗಳು ಪರಿಣಾಮಕಾರಿಯಾಗಬಲ್ಲವು. ಕೊರೊನಾಕ್ಕೆ ಆಯುರ್ವೇದಿಕ್ ಔಷಧವೇ ಮದ್ದು, ಬಹುರಾಷ್ಟ್ರೀಯ ಕಂಪನಿಗಳು ಕೇಂದ್ರ ಸರ್ಕಾರದ ಮೂಲಕ ಒತ್ತಡ ಹೇರಿ ಪತಂಜಲಿ ಕೊರೊನಾ ಔಷಧಿಯನ್ನಾಗಿ ಘೋಷಿಸದಂತೆ ತಡೆದವು. ಪತಂಜಲಿಯ ಔಷಧಿಯಲ್ಲಿ ರೋಗ ನಿರೋಧಕ ಶಕ್ತಿಯಿದ್ದು, ಈಗ ಎಲ್ಲರಿಗೂ ಇದೇ ಶಕ್ತಿ ಬೇಕಾಗಿದೆ’ ಎಂದರು.