<p><strong>ಧಾರವಾಡ</strong>: ತಾಲ್ಲೂಕಿನ ಯರಿಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಒ ನಾಗರಾಜ ಗಿಣಿವಾಲದ ಅವರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಸೇವನೆ ಮಾಡುವುದನ್ನು ಅವರು ಮೊಬೈಲ್ ವಿಡಿಯೊ ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.</p><p>‘ನಾನು ವಿಷ ಕುಡಿದು ಸಾಯುತ್ತಾ ಇದ್ದೇನೆ ಫ್ರೆಂಡ್ಸ್ ಐ ಆ್ಯಮ್ ಸಾರಿ, ಮಲ್ಲಿಕಾರ್ಜುನ ದೇವೇಂದ್ರಪ್ಪ ರೊಟ್ಟಿಗಾರು ಎಂಬವರು ಸುಮಾರುಷ್ಟು ಅಧಿಕಾರಿಗಳಿಗೆ ಬಹಳಷ್ಟು ಟಾರ್ಚರ್ ಕೊಟ್ಟಿದ್ಧಾರೆ. ನನಗೂ ಕೂಡ ಆ ತರಹನೇ ಟಾರ್ಚ್ ಕೊಟ್ಟಿದ್ಧಾರೆ. ಬೇರೆ ಬೇರೆ ತ್ರಾಸ ಕೊಡುತ್ತಿದ್ದಾರೆ. ನನ್ನ ಜೀವನ ಇಲ್ಲಿಗೆ ಎಂಡ್ ಮಾಡಬೇಕು ಎಂದುಕೊಂಡು ವಿಷ ಕುಡಿದುಕೊಂಡು ಸಾಯುತ್ತಿದ್ದೇನೆ, ಐ ಆ್ಯಮ್ ಸಾರಿ’ ಎಂದು ಪಿಡಿಒ ಹೇಳಿರುವ ವಿಡಿಯೊ ಹರಿದಾಡುತ್ತಿದೆ.</p><p>‘ಇಲಿ ಪಾಷಾಣ ಸೇವಿಸಿರುವುದಾಗಿ ಪಿಡಿಒ ನಾಗರಾಜ್ ಹೇಳಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುಣವಾಗುತ್ತಿದ್ದಾರೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಸಂಗಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.</p><p>‘ನಗರದ ಬೆಳಗಾವಿ ರಸ್ತೆಯಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಪ್ರಕರಣ ನಡೆದಿದೆ. ಅವರಿಂದ ಹೇಳಿಕೆ ಮುಂದಿನ ಕ್ರಮ ವಹಿಸಲಾಗುವುದು’ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ತಾಲ್ಲೂಕಿನ ಯರಿಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಒ ನಾಗರಾಜ ಗಿಣಿವಾಲದ ಅವರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಸೇವನೆ ಮಾಡುವುದನ್ನು ಅವರು ಮೊಬೈಲ್ ವಿಡಿಯೊ ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.</p><p>‘ನಾನು ವಿಷ ಕುಡಿದು ಸಾಯುತ್ತಾ ಇದ್ದೇನೆ ಫ್ರೆಂಡ್ಸ್ ಐ ಆ್ಯಮ್ ಸಾರಿ, ಮಲ್ಲಿಕಾರ್ಜುನ ದೇವೇಂದ್ರಪ್ಪ ರೊಟ್ಟಿಗಾರು ಎಂಬವರು ಸುಮಾರುಷ್ಟು ಅಧಿಕಾರಿಗಳಿಗೆ ಬಹಳಷ್ಟು ಟಾರ್ಚರ್ ಕೊಟ್ಟಿದ್ಧಾರೆ. ನನಗೂ ಕೂಡ ಆ ತರಹನೇ ಟಾರ್ಚ್ ಕೊಟ್ಟಿದ್ಧಾರೆ. ಬೇರೆ ಬೇರೆ ತ್ರಾಸ ಕೊಡುತ್ತಿದ್ದಾರೆ. ನನ್ನ ಜೀವನ ಇಲ್ಲಿಗೆ ಎಂಡ್ ಮಾಡಬೇಕು ಎಂದುಕೊಂಡು ವಿಷ ಕುಡಿದುಕೊಂಡು ಸಾಯುತ್ತಿದ್ದೇನೆ, ಐ ಆ್ಯಮ್ ಸಾರಿ’ ಎಂದು ಪಿಡಿಒ ಹೇಳಿರುವ ವಿಡಿಯೊ ಹರಿದಾಡುತ್ತಿದೆ.</p><p>‘ಇಲಿ ಪಾಷಾಣ ಸೇವಿಸಿರುವುದಾಗಿ ಪಿಡಿಒ ನಾಗರಾಜ್ ಹೇಳಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುಣವಾಗುತ್ತಿದ್ದಾರೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಸಂಗಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.</p><p>‘ನಗರದ ಬೆಳಗಾವಿ ರಸ್ತೆಯಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಪ್ರಕರಣ ನಡೆದಿದೆ. ಅವರಿಂದ ಹೇಳಿಕೆ ಮುಂದಿನ ಕ್ರಮ ವಹಿಸಲಾಗುವುದು’ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>