ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು, ಕರಸೇವಕರನ್ನು ಬಂಧಿಸುವ ಅಗತ್ಯ ಏನಿತ್ತು? ರಾಮಭಕ್ತರಲ್ಲಿ, ಹಿಂದೂಗಳಲ್ಲಿ ಭಯ ಮೂಡಿಸುವುದಕ್ಕಾಗಿಯೇ ಶ್ರೀಕಾಂತ ಅವರನ್ನು ಬಂಧಿಸುವಂತೆ ಪೊಲೀಸರ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಿದೆ. ಇದು ಸರ್ಕಾರದ ದುರ್ಬುದ್ಧಿ, ದುಷ್ಟ ಬುದ್ಧಿ ಎಂದು ಟೀಕಿಸಿದರು.