ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 'ಲವ್ ಜಿಹಾದ್ ಮತ್ತು ಭಯೋತ್ಪಾದಕರನ್ನು ನೀವು ಬ್ರದರ್ಸ್ ಎನ್ನುತ್ತೀರಿ. ಆಕಸ್ಮಿಕ ಎನ್ನಲು ಇದು ಅಪಘಾತವೇ? ಪ್ರೀತಿ ಮಾಡುವುದಿಲ್ಲ ಎಂದರೆ ಕೊಲೆ ಮಾಡಬೇಕೆ? ಗೃಹ ಸಚಿವರು ತಮ್ಮ ಹೇಳಿಕೆಗೆ ತಕ್ಷಣ ಕ್ಷಮೆ ಯಾಚಿಸಬೇಕು' ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಪ್ರಭು ನವಲಗುಂದಮಠ, ಅನೂಫ್ ಬಿಜವಾಡ, ಚಂದ್ರಶೇಖರ ಗೋಕಾಕ, ಅಮೃತ ಹಿರೇಮಠ, ಚನ್ನಯ್ಯ ಚೌಕಿಮಠ, ಶಿವಯ್ಯ ಹಿತೇಮಠ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಸ್ಥಳೀಯರು ನೇಹಾ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಮಂಟೂರು ರಸ್ತೆಯ ಕಲಬುರ್ಗಿ ಮಠದ ಬಳಿಯಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.