ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ‘1992ರಲ್ಲಿ ಚನ್ನಮ್ಮ ಮೂರ್ತಿ ಎದುರು ಕನ್ನಡ ಧ್ವಜ ಹಾರಿಸಲು ಕಂಬ ಅಳವಡಿಸಲಾಗಿತ್ತು. ಅಲ್ಲಿ ಕನ್ನಡದ ಧ್ವಜ ಹಾರಿಸಿ, ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಎರಡು–ಮೂರು ವರ್ಷಗಳಿಂದ ಕಂಬ ಅಲುಗಾಡುತ್ತಿದ್ದು, ಬೀಳುವ ಸ್ಥಿತಿಯಲ್ಲಿದೆ. ಹಿಂದಿನ ಮೇಯರ್ ಅವರಿಗೆ ಮನವಿ ಸಲ್ಲಿಸಿ, ₹25 ಸಾವಿರ ವೆಚ್ಚದಲ್ಲಿ 20 ಅಡಿ ಎತ್ತರದ ಹೊಸ ಕಂಬ ಸಿದ್ಧಪಡಿಸಲಾಗಿತ್ತು. ಆದರೆ, ಈವರೆಗೆ ಅದನ್ನು ಅಳವಡಿಸಲಾಗಿಲ್ಲ’ ಎಂದರು.