<p><strong>ಹುಬ್ಬಳ್ಳಿ:</strong> ಕೋವಿಡ್ ಇರುವ ಕಾರಣ ಮಂಗಳವಾರ ನಗರದಲ್ಲಿ ಕೃಷ್ಣಾ ಜನ್ಮಾಷ್ಟಮಿ ಆಚರಣೆಯ ಸಂಭ್ರಮ ಕಳೆದ ವರ್ಷದಷ್ಟು ಕಂಡುಬರಲಿಲ್ಲ. ಆದರೆ, ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆಯಂತೆ ಅಲಂಕಾರ ಮಾಡಿ ಖುಷಿ ಪಟ್ಟರು.</p>.<p>ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಕೃಷ್ಣನ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಇಸ್ಕಾನ್ನಲ್ಲಿ ಬುಧವಾರ ಕಾರ್ಯಕ್ರಮ ಜರುಗಲಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ, ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಪೂಜಾ ಕಾರ್ಯಗಳು ಜರುಗಲಿವೆ. ಎಲ್ಲ ಕಾರ್ಯಕ್ರಮಗಳನ್ನು www.youtube.com/c/ISKCONHUBLIDHARWADVIDEOS ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲ್ಲಿನ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ್ ತಿಳಿಸಿದ್ದಾರೆ.</p>.<p>ಇಸ್ಕಾನ್ನಲ್ಲಿ ಬುಧವಾರ ಬೆಳಿಗ್ಗೆ 4.30ಗೆ ಶ್ರೀಕೃಷ್ಣ ಬಲರಾಮರಿಗೆ ಮಂಗಳಾರತಿ, ಶೃಂಗಾರ ಆರತಿ, ವಿಶೇಷ ನೈವೇದ್ಯ, ಕೃಷ್ಣ ಬಾಲರಾಮರಿಗೆ 108 ಬಗೆಯ ಭಕ್ಷ್ಯಗಳ ನೈವೇದ್ಯ, ಮಹಾ ಅಭಿಷೇಕ ನಡೆಯಲಿದೆ.</p>.<p>ಕಾಲೇಜಿನಲ್ಲಿ ಆಚರಣೆ: ಹುಬ್ಬಳ್ಳಿ ಸಮೀಪದ ಬುಡರಸಿಂಗಿಯಲ್ಲಿರುವ ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ ಕೆ.ಎಸ್.ಎಸ್.ಎಸ್. ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.</p>.<p>ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ. ಜಿ. ಕೆ. ಸತ್ಯಮೂರ್ತಿ ಆಚಾರ್ಯ ಮಾತನಾಡಿ ’ದೇವರ ರೂಪಗಳು ಅನೇಕ ತರಹಗಳಿದ್ದು, ಆದರೆ ಕೃಷ್ಣನ ರೂಪ ಎಲ್ಲರನ್ನೂ ಸೆಳೆಯುತ್ತದೆ’ ಎಂದರು.</p>.<p>ವಿಶ್ವಪ್ರಸನ್ನತೀರ್ಥರ ಆದೇಶದಂತೆ 10ನೇ ತರಗತಿಯಲ್ಲಿ ಶೇ 94ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದರು. ಕಾಲೇಜಿನ ಅಡಳಿತ ಮಂಡಳಿಯ ಕಾರ್ಯದರ್ಶಿ ಗೋಪಾಲ್ ಕುಲಕರ್ಣಿ, ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಕೋವಿಡ್ ಇರುವ ಕಾರಣ ಮಂಗಳವಾರ ನಗರದಲ್ಲಿ ಕೃಷ್ಣಾ ಜನ್ಮಾಷ್ಟಮಿ ಆಚರಣೆಯ ಸಂಭ್ರಮ ಕಳೆದ ವರ್ಷದಷ್ಟು ಕಂಡುಬರಲಿಲ್ಲ. ಆದರೆ, ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆಯಂತೆ ಅಲಂಕಾರ ಮಾಡಿ ಖುಷಿ ಪಟ್ಟರು.</p>.<p>ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಕೃಷ್ಣನ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಇಸ್ಕಾನ್ನಲ್ಲಿ ಬುಧವಾರ ಕಾರ್ಯಕ್ರಮ ಜರುಗಲಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ, ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಪೂಜಾ ಕಾರ್ಯಗಳು ಜರುಗಲಿವೆ. ಎಲ್ಲ ಕಾರ್ಯಕ್ರಮಗಳನ್ನು www.youtube.com/c/ISKCONHUBLIDHARWADVIDEOS ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲ್ಲಿನ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ್ ತಿಳಿಸಿದ್ದಾರೆ.</p>.<p>ಇಸ್ಕಾನ್ನಲ್ಲಿ ಬುಧವಾರ ಬೆಳಿಗ್ಗೆ 4.30ಗೆ ಶ್ರೀಕೃಷ್ಣ ಬಲರಾಮರಿಗೆ ಮಂಗಳಾರತಿ, ಶೃಂಗಾರ ಆರತಿ, ವಿಶೇಷ ನೈವೇದ್ಯ, ಕೃಷ್ಣ ಬಾಲರಾಮರಿಗೆ 108 ಬಗೆಯ ಭಕ್ಷ್ಯಗಳ ನೈವೇದ್ಯ, ಮಹಾ ಅಭಿಷೇಕ ನಡೆಯಲಿದೆ.</p>.<p>ಕಾಲೇಜಿನಲ್ಲಿ ಆಚರಣೆ: ಹುಬ್ಬಳ್ಳಿ ಸಮೀಪದ ಬುಡರಸಿಂಗಿಯಲ್ಲಿರುವ ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ ಕೆ.ಎಸ್.ಎಸ್.ಎಸ್. ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.</p>.<p>ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ. ಜಿ. ಕೆ. ಸತ್ಯಮೂರ್ತಿ ಆಚಾರ್ಯ ಮಾತನಾಡಿ ’ದೇವರ ರೂಪಗಳು ಅನೇಕ ತರಹಗಳಿದ್ದು, ಆದರೆ ಕೃಷ್ಣನ ರೂಪ ಎಲ್ಲರನ್ನೂ ಸೆಳೆಯುತ್ತದೆ’ ಎಂದರು.</p>.<p>ವಿಶ್ವಪ್ರಸನ್ನತೀರ್ಥರ ಆದೇಶದಂತೆ 10ನೇ ತರಗತಿಯಲ್ಲಿ ಶೇ 94ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದರು. ಕಾಲೇಜಿನ ಅಡಳಿತ ಮಂಡಳಿಯ ಕಾರ್ಯದರ್ಶಿ ಗೋಪಾಲ್ ಕುಲಕರ್ಣಿ, ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>