ಹುಬ್ಬಳ್ಳಿ: ನಗರದ ಮಂಟೂರಿನ ಬಳಿ ನಿರ್ಮಿಸಿರುವ ನೂತನ ರೈಲ್ವೆ ಕೆಳ ಸೇತುವೆಯನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಮಂಗಳವಾರ ಉದ್ಘಾಟಿಸಿದರು.
ಭಾರತೀಯ ಆಹಾರ ನಿಗಮ ದ್ವಾರದ ಲೆವೆಲ್ ಕ್ರಾಸಿಂಗ್ ಬಳಿ ಇರುವ ಈ ಸೇತುವೆಯನ್ನು ₹4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಿಕ್ಕಜಾಜೂರು ಮತ್ತು ಹುಬ್ಬಳ್ಳಿ ಮಧ್ಯೆ ಜೋಡಿ ಹಳಿ ಮಾರ್ಗದ ನಿರ್ಮಾಣದ ಭಾಗವಾಗಿ, 2018ರಲ್ಲಿ ಸೇತವೆ ಕಾಮಗಾರಿ ಆರಂಭಿಸಲಾಗಿತ್ತು.
ಸಿಎಒ ಕನ್ಸ್ಟ್ರಕ್ಷನ್ನ ಕೆ.ಸಿ. ಸ್ವಾಮಿ ಮತ್ತು ಸಿಇ ಕನ್ಸ್ಟಕ್ಷನ್ನ ಪ್ರೇಮ್ ನಾರಾಯಣ್ ಮಾರ್ಗದರ್ಶನದಲ್ಲಿ, ಲಾಕ್ಡೌನ್ ಮತ್ತು ಕೊರೊನಾ ಆತಂಕದ ನಡುವೆಯೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.