ಹುಬ್ಬಳ್ಳಿ: ನಗರ ಹಾಗೂ ಸುತ್ತಮುತ್ತ ಮಂಗಳವಾರ ಸುರಿದ ಮಳೆ ಸುರಿಯಿತು. ಒಂದೂವರೆ ತಾಸು ಸುರಿದ ಸಾಧಾರಣ ಮಳೆಯಿಂದ ಬಿಸಿಲಿನ ಝಳಕ್ಕೆ ತಂಪನೆರೆಯಿತು.
ಮುನ್ಸೂಚನೆ ಇಲ್ಲದೆ ಏಕಾಏಕಿಯಾಗಿ ಸುರಿದ ಮಳೆಯಿಂದಾಗಿ ತೊಂದರೆಯಾಯಿತು. ಛತ್ರಿಗಳಿಲ್ಲದರಿಂದ ನೆನೆದುಕೊಂಡೇ ಮನೆಯತ್ತ ಹೆಜ್ಜೆ ಹಾಕಿದರು. ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯಿತು. ಬೀದಿ ಬದಿ ವ್ಯಾಪಾರಿಗಳು ತಮ್ಮ ತರಕಾರಿ ಹಾಗೂ ಇತರ ಸಾಮಾನುಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು.