ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಡೆದಾಡುವ ವಿಶ್ವಕೋಶ ಪ್ರಶಸ್ತಿ, ಬಸವ ಪಂಡಿತ ಪ್ರಶಸ್ತಿ, ಶರಣ ಸಾಹಿತ್ಯ, ಸಾಹಿತ್ಯ ಶ್ರೀ, ಸೇವಾ ರತ್ನ, ಶರಣ ಶ್ರೀ, ಶಿಕ್ಷಣ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. 2018ರಲ್ಲಿ ಸ್ವಂತ ಗ್ರಾಮದಲ್ಲಿ ನಡೆದ ಹುಬ್ಬಳ್ಳಿ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.