ಸಂಘದ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಹೇಮನಗೌಡ ಬ. ಬಸನಗೌಡ್ರ ಮಾತನಾಡಿ, ‘2019ರಲ್ಲಿ ಇಬ್ಬರು, 2020ರಲ್ಲಿ ಒಬ್ಬರು, 2021ರಲ್ಲಿ ಮೂವರು ಈ ಸ್ಥಳದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಈ ವರ್ಷ 8 ಮಂದಿ ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ರೈತರು ಸಹ ಮೃತಪಟ್ಟಿದ್ದಾರೆ. ನೂಲ್ವಿ, ಬೆಳಗಲಿ ರೈತರು ಜಮೀನಿಗೆ ತೆರಳಲು ಈ ಹೆದ್ದಾರಿ ದಾಟಬೇಕಿದ್ದು, ವೇಗವಾಗಿ ಸಂಚರಿಸುವ ವಾಹನಗಳಿಂದ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.