'ಸಮಿತಿಯ ವರದಿಗೆ ತಮ್ಮ ವಿರೋಧವಿದೆ' ಎಂದು ಸಮಿತಿಯಲ್ಲಿದ್ದ ಇಬ್ಬರು ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ಸಂತೋಷ, 'ಸಮಿತಿ ಸದಸ್ಯ ನಿರಂಜನ ಹಿರೇಮಠ ಅವರು ಸಮಿತಿಯ ಮೂರುದಿನ ಕಾರ್ಯದಲ್ಲಿ ಒಂದೂವರೆ ದಿನ ನಮ್ಮ ಜೊತೆ ಇದ್ದರು. ಇಮ್ರಾನ್ ಎಲಿಗಾರ ಅವರು ಇಂದು ಬೆಳಿಗ್ಗೆ ಮಾತ್ರ ಒಂದು ತಾಸು ಜೊತೆ ಇದ್ದರು. ಪಾಲಿಕೆ ವಿರೋಧ ಪಕ್ಷದ ನಾಯಕರು ಸಮಿತಿ ವಿರೋಧಿಸಿ ಮೇಯರ್ ಅವರಿಗೆ ಮನವಿ ನೀಡಿದಾಗ, ಇವರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಸಮಿತಿಯ ಸಭೆ ನಡೆಸುವಾಗಲೂ ಅವರನ್ನು ಸಂಪರ್ಕಿಸಿದ್ದೇವೆ. ಸಭೆಗೆ ತಮ್ಮನ್ನು ಕರೆದಿಲ್ಲ ಎನ್ನುವ ಅವರ ಆರೋಪದಲ್ಲಿ ಹುರುಳಿಲ್ಲ' ಎಂದರು.