<p><strong>ಹುಬ್ಬಳ್ಳಿ:</strong> ‘ರಾಜ್ಯದಲ್ಲಿ ದಾಖಲೆಯಿಲ್ಲದ 6,500 ವಸತಿ ಪ್ರದೇಶಗಳನ್ನು ಗುರುತಿಸಿ, 4,500ಕ್ಕೂ ಹೆಚ್ಚು ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಉಳಿದ ವಸತಿ ಪ್ರದೇಶಗಳ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.</p>.<p>‘ಯಾರಿಂದಲೂ ಅರ್ಜಿ ಪಡೆಯದೆ, ಸರ್ಕಾರವೇ ದಾಖಲೆಗಳನ್ನು ಸಂಗ್ರಹಿಸಿ ಕಂದಾಯ ಗ್ರಾಮವೆಂದು ಘೋಷಿಸುತ್ತಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಉಳಿದ ವಸತಿ ಪ್ರದೇಶಗಳನ್ನು 2026ರ ಡಿಸೆಂಬರ್ ಒಳಗೆ ಕಂದಾಯ ಗ್ರಾಮಗಳೆಂದು ಘೋಷಿಸುವ ಗುರಿ ಇತ್ತು. ಕೇಂದ್ರ ಸರ್ಕಾರದ ಜನಗಣತಿಯಿರುವುದರಿಂದ, ಹೊಸ ಕಂದಾಯ ಗ್ರಾಮ ಘೋಷಿಸದಂತೆ ಸೂಚಿಸಿದೆ. ಸೂಚನೆ ಹಿಂಪಡೆದ ತಕ್ಷಣ ಹೊಸ ಕಂದಾಯ ಗ್ರಾಮಗಳನ್ನು ಘೋಷಿಸಲಾಗುವುದು’ ಎಂದರು.</p>.<p>‘ಸರ್ಕಾರಿ ಜಮೀನುಗಳ ಒತ್ತುವರಿ ತಡೆಯಲು ತಂತ್ರಜ್ಞಾನ ಆಧಾರಿತ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈಗಾಗಲೇ ಕಂದಾಯ ಇಲಾಖೆಯ ಜಮೀನುಗಳು ಆ ಸಾಫ್ಟ್ವೇರ್ನಲ್ಲಿ ದಾಖಲೆ ಸಹಿತ ಸೇರ್ಪಡೆಯಾಗಿವೆ. ಉಳಿದ ಇಲಾಖೆಗಳಿಗೂ ಅವಕಾಶ ಕಲ್ಪಿಸಲಾಗುತ್ತಿದ್ದು, ಆಸಕ್ತಿಯಿಂದ ತಮ್ಮ ಇಲಾಖೆಯಲ್ಲಿನ ಜಮೀನುಗಳನ್ನು ಸೇರ್ಪಡೆ ಮಾಡಬಹುದು’ ಎಂದು ಸಚಿವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ರಾಜ್ಯದಲ್ಲಿ ದಾಖಲೆಯಿಲ್ಲದ 6,500 ವಸತಿ ಪ್ರದೇಶಗಳನ್ನು ಗುರುತಿಸಿ, 4,500ಕ್ಕೂ ಹೆಚ್ಚು ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಉಳಿದ ವಸತಿ ಪ್ರದೇಶಗಳ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.</p>.<p>‘ಯಾರಿಂದಲೂ ಅರ್ಜಿ ಪಡೆಯದೆ, ಸರ್ಕಾರವೇ ದಾಖಲೆಗಳನ್ನು ಸಂಗ್ರಹಿಸಿ ಕಂದಾಯ ಗ್ರಾಮವೆಂದು ಘೋಷಿಸುತ್ತಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಉಳಿದ ವಸತಿ ಪ್ರದೇಶಗಳನ್ನು 2026ರ ಡಿಸೆಂಬರ್ ಒಳಗೆ ಕಂದಾಯ ಗ್ರಾಮಗಳೆಂದು ಘೋಷಿಸುವ ಗುರಿ ಇತ್ತು. ಕೇಂದ್ರ ಸರ್ಕಾರದ ಜನಗಣತಿಯಿರುವುದರಿಂದ, ಹೊಸ ಕಂದಾಯ ಗ್ರಾಮ ಘೋಷಿಸದಂತೆ ಸೂಚಿಸಿದೆ. ಸೂಚನೆ ಹಿಂಪಡೆದ ತಕ್ಷಣ ಹೊಸ ಕಂದಾಯ ಗ್ರಾಮಗಳನ್ನು ಘೋಷಿಸಲಾಗುವುದು’ ಎಂದರು.</p>.<p>‘ಸರ್ಕಾರಿ ಜಮೀನುಗಳ ಒತ್ತುವರಿ ತಡೆಯಲು ತಂತ್ರಜ್ಞಾನ ಆಧಾರಿತ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈಗಾಗಲೇ ಕಂದಾಯ ಇಲಾಖೆಯ ಜಮೀನುಗಳು ಆ ಸಾಫ್ಟ್ವೇರ್ನಲ್ಲಿ ದಾಖಲೆ ಸಹಿತ ಸೇರ್ಪಡೆಯಾಗಿವೆ. ಉಳಿದ ಇಲಾಖೆಗಳಿಗೂ ಅವಕಾಶ ಕಲ್ಪಿಸಲಾಗುತ್ತಿದ್ದು, ಆಸಕ್ತಿಯಿಂದ ತಮ್ಮ ಇಲಾಖೆಯಲ್ಲಿನ ಜಮೀನುಗಳನ್ನು ಸೇರ್ಪಡೆ ಮಾಡಬಹುದು’ ಎಂದು ಸಚಿವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>