ಫೆ.18 ರಂದು ಗುಳ್ಳಪ್ಪ ಅವರಿಗೆ ಎಚ್.ಡಿ.ಬಿ. ಫೈನಾನ್ಸ್ ಎದುರು ಆರೋಪಿ ಶಿವಾನಂದ, ಫೈನಾನ್ಸ್ನ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡು ಓಎಲ್ಎಕ್ಸ್ನಲ್ಲಿ ಜೆಸಿಬಿ ಮಾರಾಟಕ್ಕಿದೆ ಎಂದು ನಂಬಿಸಿದ್ದ. ಜೆಸಿಬಿ ತೋರಿಸಿ ₹ 16 ಲಕ್ಷಕ್ಕೆ ವ್ಯವಹಾರ ಕುದುರಿಸಿ, ಗುಳ್ಳಪ್ಪ ಅವರಿಂದ ದಾಖಲೆಗಳ ಜೊತೆ ಮುಂಗಡವಾಗಿ ₹5 ಲಕ್ಷ ಪಡೆದಿದ್ದ. ನಂತರ ಜೆಸಿಬಿಯನ್ನೂ ನೀಡದೆ, ಹಣವನ್ನೂ ಮರಳಿಸದೆ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.