<p><strong>ಹುಬ್ಬಳ್ಳಿ</strong>: ‘ಭಾರತವನ್ನು ಇಬ್ಭಾಗ ಮಾಡಲು ಸಾಕಷ್ಟು ಕ್ಷುದ್ರ ಶಕ್ತಿಗಳು ಪ್ರಯತ್ನಿಸುತ್ತಿವೆ. ಹಿಂದೂಗಳು ಒಗ್ಗಟ್ಟಾಗಿ ಅದನ್ನು ತಡೆಯಲು ಮುಂದಾಗಬೇಕು’ ಎಂದು ಆರ್ಎಸ್ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.</p>.<p>ಇಲ್ಲಿನ ನವನಗರದ ಹಳೇ ಕೆಎಚ್ಬಿ ಕಾಲೊನಿಯ ಬಜರಂಗಿ ಮೈದಾನದಲ್ಲಿ ನವನಗರ, ಗಾಮನಗಟ್ಟಿ, ಅಮರಗೋಳ, ಸುತಗಟ್ಟಿ, ರಾಯಾಪುರ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಈ ಹಿಂದೆ ಕುತಂತ್ರದಿಂದ ಬ್ರಿಟಿಷರು ಸೇರಿದಂತೆ ಅನೇಕರು ದೇಶವನ್ನು ಆಳಿದ್ದಾರೆ. ಮತ್ತೀಗ ಅಂತಹದ್ದೇ ಕುತಂತ್ರ ನಡೆಯುತ್ತಿದೆ. ಹೀಗಾಗಿ ಹಿಂದೂಗಳೆಲ್ಲ ಒಂದಾಗಬೇಕು’ ಎಂದರು.</p>.<p>‘ಸಮಸ್ತ ಜಗತ್ತು ಸುಖದಿಂದ ಇರಬೇಕು ಎಂದು ಹಿಂದೂಗಳು ಬಯಸುತ್ತಾರೆ. ಸಂಸ್ಕೃತ, ಜ್ಞಾನವನ್ನು ಜಗತ್ತಿಗೆ ನೀಡಿದವರು ನಾವು. ಇಂಥ ಪವಿತ್ರ ರಾಷ್ಟ್ರ ಉಳಿಸಲು ಜಾತಿ-ಭೇದ ಮರೆತು ಹೋರಾಡಬೇಕು’ ಎಂದು ಹೇಳಿದರು.</p>.<p>ಗದಗನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಸಿ.ಎಂ. ಮಠ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ, ಸ್ವಾಮಿ ಮಹಾಜನಶೆಟ್ಟರ್, ಸುಭಾಷಸಿಂಗ್ ಜಮಾದಾರ, ಜಯತೀರ್ಥ ಕಟ್ಟಿ, ನರೇಂದ್ರ ಕುಲಕರ್ಣಿ, ಬಸವರಾಜ ಕುಂದಗೋಳಮಠ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಭಾರತವನ್ನು ಇಬ್ಭಾಗ ಮಾಡಲು ಸಾಕಷ್ಟು ಕ್ಷುದ್ರ ಶಕ್ತಿಗಳು ಪ್ರಯತ್ನಿಸುತ್ತಿವೆ. ಹಿಂದೂಗಳು ಒಗ್ಗಟ್ಟಾಗಿ ಅದನ್ನು ತಡೆಯಲು ಮುಂದಾಗಬೇಕು’ ಎಂದು ಆರ್ಎಸ್ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.</p>.<p>ಇಲ್ಲಿನ ನವನಗರದ ಹಳೇ ಕೆಎಚ್ಬಿ ಕಾಲೊನಿಯ ಬಜರಂಗಿ ಮೈದಾನದಲ್ಲಿ ನವನಗರ, ಗಾಮನಗಟ್ಟಿ, ಅಮರಗೋಳ, ಸುತಗಟ್ಟಿ, ರಾಯಾಪುರ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಈ ಹಿಂದೆ ಕುತಂತ್ರದಿಂದ ಬ್ರಿಟಿಷರು ಸೇರಿದಂತೆ ಅನೇಕರು ದೇಶವನ್ನು ಆಳಿದ್ದಾರೆ. ಮತ್ತೀಗ ಅಂತಹದ್ದೇ ಕುತಂತ್ರ ನಡೆಯುತ್ತಿದೆ. ಹೀಗಾಗಿ ಹಿಂದೂಗಳೆಲ್ಲ ಒಂದಾಗಬೇಕು’ ಎಂದರು.</p>.<p>‘ಸಮಸ್ತ ಜಗತ್ತು ಸುಖದಿಂದ ಇರಬೇಕು ಎಂದು ಹಿಂದೂಗಳು ಬಯಸುತ್ತಾರೆ. ಸಂಸ್ಕೃತ, ಜ್ಞಾನವನ್ನು ಜಗತ್ತಿಗೆ ನೀಡಿದವರು ನಾವು. ಇಂಥ ಪವಿತ್ರ ರಾಷ್ಟ್ರ ಉಳಿಸಲು ಜಾತಿ-ಭೇದ ಮರೆತು ಹೋರಾಡಬೇಕು’ ಎಂದು ಹೇಳಿದರು.</p>.<p>ಗದಗನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಸಿ.ಎಂ. ಮಠ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ, ಸ್ವಾಮಿ ಮಹಾಜನಶೆಟ್ಟರ್, ಸುಭಾಷಸಿಂಗ್ ಜಮಾದಾರ, ಜಯತೀರ್ಥ ಕಟ್ಟಿ, ನರೇಂದ್ರ ಕುಲಕರ್ಣಿ, ಬಸವರಾಜ ಕುಂದಗೋಳಮಠ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>