ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಉದ್ಯೋಗದಿಂದ ಸ್ವಾವಲಂಬನೆ: ಅಬ್ಬಯ್ಯ

Last Updated 24 ಜೂನ್ 2021, 16:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಲ್ಪಸಂಖ್ಯಾತ ಸಮುದಾಯದ ಜನರು ಸರ್ಕಾರದ ಸಾಲ ಸೌಲಭ್ಯಗಳ ಪ್ರಯೋಜನ ಪಡೆದು, ಪ್ರಗತಿ ಸಾಧಿಸಬೇಕು. ಸ್ವಉದ್ಯೋಗದಿಂದ ಆರ್ಥಿಕ ಸ್ವಾವಲಂಬಿಗಳಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರ ಭವಿಷ್ಯ ರೂಪಿಸಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಸಲಹೆ ನೀಡಿದರು.

ನಗರದ ಗಣೇಶಪೇಟೆಯಲ್ಲಿ ಗುರುವಾರ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ‘ಮೈಕ್ರೊ ಸಾಲ’ ಯೋಜನೆಯಡಿ, ಸ್ವಉದ್ಯೋಗಕ್ಕಾಗಿ ಮಂಜೂರಾದ ತಲಾ ₹10 ಸಾವಿರ ಕಿರುಸಾಲ ಸೌಲಭ್ಯದ ತಿಳಿವಳಿಕೆ ಪತ್ರವನ್ನು 84 ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಸ್ಥಳೀಯ ಮುಖಂಡ ಇಲಿಯಾಸ್ ಮನಿಯಾರ್ ಮಾತನಾಡಿ, ‘ಶಾಸಕ ಪ್ರಸಾದ ಅಬ್ಬಯ್ಯ ಅವರಿಂದಾಗಿ ಪೂರ್ವ ಕ್ಷೇತ್ರ ಅಭಿವೃದ್ಧಿಗೊಂಡಿದೆ. ಅವರ ಕಾರ್ಯವೈಖರಿ ನಮಗೆಲ್ಲ ಪ್ರೇರಣೆಯಾಗಿದೆ’ ಎಂದರು.

ಮುಖಂಡರಾದ ವಿಜನಗೌಡ ಪಾಟೀಲ, ಮುತುವಲ್ಲಿ ವಜೀರ್ ಅಹ್ಮದ್ ಕುಮಟಾಕರ್, ಮುಖಂಡರಾದ ಶಫಿ ಮುದ್ದೇಬಿಹಾಳ, ಬಾಬಾಜಾನ್ ಮುಧೋಳ, ರಶೀದ ಬೋಲಾಬಾಯಿ, ಇಕ್ಬಾಲ್ ಚಿತ್ತೇವಾಲೆ, ಇನಾಯತ್ ಖಾನ್ ಪಠಾಣ್, ಕುಮಾರ ಕುಂದನಹಳ್ಳಿ, ನಿಸಾರ್ ಅಹ್ಮದ್ ನೀಲಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT