ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕುಂಭಮೇಳ ಹಾಗೂ ಪಶ್ಚಿಮ ಬಂಗಾಳದಲ್ಲಿ ವಿನಾಕಾರಣ ಹಲವು ಹಂತಗಳಲ್ಲಿ ಚುನಾವಣೆ ನಡೆಸಿದ ಪರಿಣಾಮ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹೆಚ್ಚಾಯಿತು. ಮೂರನೆ ಅಲೆಯ ಆತಂಕದಲ್ಲಿರುವ ಕಾರಣ ಈಗ ಚುನಾವಣೆ ನಡೆಸಬಾರದು. ಸರ್ಕಾರ ಯಾವಾಗಲೂ ಸಮಸ್ಯೆಯ ಭಾಗವಾಗಬಾರದು, ಜನರ ಜೀವದ ಜೊತೆ ಚೆಲ್ಲಾಟವಾಡಬಾರದು’ ಎಂದರು.