ಗ್ರಾಮದ ರೈತ ಶ್ರೀಕಾಂತ ಮಡಿವಾಳರ ವಿರೂಪಾಕ್ಷಪ್ಪ ಯಾವಗಲ್ ಎಂಬುವರು ಊರ ಹೊರವಲಯದ ಹಳೇ ಬಸ್ ನಿಲ್ದಾಣದ ಹತ್ತಿರದ ಹೊಲದಲ್ಲಿನ ಜಾಗದಲ್ಲಿ ಸಂಗ್ರಹಿಸಿದ್ದ 6 ಟ್ರ್ಯಾಕ್ಟರ್ ಉದ್ದು, ಸೋಯಾಬೀನ್ ಹೊಟ್ಟು ಹಾಗೂ ಶಿವಪ್ಪ ಹಳಮನಿ ಎಂಬುವವರ ಒಂದು ಟ್ರ್ಯಾಕ್ಟರ್ನಷ್ಟು ಜೋಳದ ಮೇವು ಬೆಂಕಿಗಾಹುತಿಯಾಗಿದೆ. ಪಕ್ಕದಲ್ಲೇ ಎತ್ತುಗಳನ್ನು ಕಟ್ಟಿದ್ದರು, ಆದರೆ ಕೂಡಲೇ ಅವುಗಳನ್ನು ಬಿಚ್ಚಿ ಬೇರೆಡೆಗೆ ಸಾಗಿಸಲಾಯಿತು ಎನ್ನಲಾಗಿದೆ.