<p><strong>ಹುಬ್ಬಳ್ಳಿ: </strong>ಇಲ್ಲಿನ ನೇಕಾರ ಕಾಲೊನಿಯ ಗಣೇಶ ನಗರದಲ್ಲಿ ವಾಸವಾಗಿರುವ ಶೀತಲ್ ರಾಶಿನಕರ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ.</p>.<p>ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿದ ಕಳ್ಳರು ಕಿಟಕಿಯಿಂದ ಬಾಗಿಲು ತೆರೆದು ಮನೆಯಲ್ಲಿದ್ದ ₹20 ಸಾವಿರ ನಗದು ಮತ್ತು ₹36 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಆನ್ಲೈನ್ ವಂಚನೆ: ಗೋ ನೈಸ್ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ವಿದ್ಯಾನಗರದ ಮಹಿಳೆಯೊಬ್ಬರನ್ನು ನಂಬಿಸಿ ಅವರಿಂದ ₹60 ಸಾವಿರ ವಂಚನೆ ಮಾಡಲಾಗಿದೆ.</p>.<p>ನೀವು ಕಂಪನಿಯಿಂದ ಲಕ್ಕಿ ಡ್ರಾಗೆ ಆಯ್ಕೆಯಾಗಿದ್ದೀರಿ. ₹5 ಸಾವಿರ ಮೌಲ್ಯದ ಉಪಕರಣಗಳನ್ನು ಖರೀದಿಸಿದರೆ ಟಿವಿ, ಫ್ರಿಡ್ಜ್, ಲ್ಯಾಪ್ಟಾಪ್ ಮತ್ತು ಐ ಫೋನ್ ಉಡುಗೊರೆಯಾಗಿ ಲಭಿಸುತ್ತದೆ ಎಂದು ಹೇಳಿದ್ದನ್ನು ನಂಬಿ ಆ ಮಹಿಳೆ ₹5,498 ಮೌಲ್ಯದ ಉಪಕರಣ ಖರೀದಿಸಿದ್ದಾರೆ.</p>.<p>ಇದಾದ ಬಳಿಕ ಇನ್ನೊಬ್ಬ ವ್ಯಕ್ತಿ ಕರೆ ಮಾಡಿ ನೀವು ಬಯಸಿದ ಉಡುಗೊರೆ ಪಡೆಯಲು ಹಣ ನೀಡಬೇಕು ಎಂದು ಹೇಳಿ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಇಲ್ಲಿನ ನೇಕಾರ ಕಾಲೊನಿಯ ಗಣೇಶ ನಗರದಲ್ಲಿ ವಾಸವಾಗಿರುವ ಶೀತಲ್ ರಾಶಿನಕರ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ.</p>.<p>ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿದ ಕಳ್ಳರು ಕಿಟಕಿಯಿಂದ ಬಾಗಿಲು ತೆರೆದು ಮನೆಯಲ್ಲಿದ್ದ ₹20 ಸಾವಿರ ನಗದು ಮತ್ತು ₹36 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಆನ್ಲೈನ್ ವಂಚನೆ: ಗೋ ನೈಸ್ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ವಿದ್ಯಾನಗರದ ಮಹಿಳೆಯೊಬ್ಬರನ್ನು ನಂಬಿಸಿ ಅವರಿಂದ ₹60 ಸಾವಿರ ವಂಚನೆ ಮಾಡಲಾಗಿದೆ.</p>.<p>ನೀವು ಕಂಪನಿಯಿಂದ ಲಕ್ಕಿ ಡ್ರಾಗೆ ಆಯ್ಕೆಯಾಗಿದ್ದೀರಿ. ₹5 ಸಾವಿರ ಮೌಲ್ಯದ ಉಪಕರಣಗಳನ್ನು ಖರೀದಿಸಿದರೆ ಟಿವಿ, ಫ್ರಿಡ್ಜ್, ಲ್ಯಾಪ್ಟಾಪ್ ಮತ್ತು ಐ ಫೋನ್ ಉಡುಗೊರೆಯಾಗಿ ಲಭಿಸುತ್ತದೆ ಎಂದು ಹೇಳಿದ್ದನ್ನು ನಂಬಿ ಆ ಮಹಿಳೆ ₹5,498 ಮೌಲ್ಯದ ಉಪಕರಣ ಖರೀದಿಸಿದ್ದಾರೆ.</p>.<p>ಇದಾದ ಬಳಿಕ ಇನ್ನೊಬ್ಬ ವ್ಯಕ್ತಿ ಕರೆ ಮಾಡಿ ನೀವು ಬಯಸಿದ ಉಡುಗೊರೆ ಪಡೆಯಲು ಹಣ ನೀಡಬೇಕು ಎಂದು ಹೇಳಿ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>