‘ಯಾಕಪ್ಪಾ ನಾವು ಏನು ಮಾಡಿದ್ದೀವಿ ನಿಮಗೆ? ಸೈನಿಕರ ಬಗ್ಗೆ ಮಾತಾಡಲು ಇದೇ ಟಾಪಿಕ್ ಸಿಕ್ಕಿದ್ದಾ ನಿಮಗೆ? ಬೇರೆ ಏನೂ ಸಿಗಲಿಲ್ವಾ? ಇಷ್ಟೊಂದು ಓದಿರೋರು ಇಲ್ಲಿಗೆ ಬಂದಿದ್ದೀರಿ. ಹೊಸ ತಲೆಮಾರಿನವರಿಗೆ ಏನು ಕಲಿಸ್ತಾ ಇದ್ದೀರಿ?ಇದು ಎಂಥ ಸಮ್ಮೇಳನ? ಇಂಥ ಪವಿತ್ರ ಸ್ಥಳದಲ್ಲಿ ನಿಂತು ಹೀಗೆ ಮಾತಾಡೋದು ಸರೀನಾ? ಇಂಥ ಸಾಹಿತಿಗಳನ್ನು ಯಾಕೆ ಕರೆಸ್ತಾರೆ? ಇಲ್ಲಿರೋರೆ ಇದಕ್ಕಿಂತ ಒಳ್ಳೇದು ಮಾತಾಡ್ತಾರೆ’ ಎಂದು ಶಿವಾನಂದ ತಳ್ಳಿ ಬೇಸರ ವ್ಯಕ್ತಪಡಿಸಿದರು.