‘ಕಾಂಗ್ರೆಸ್ ಮನಸ್ಥಿತಿ ಒಪ್ಪುವ ಕೆಲ ಮಾಧ್ಯಮದ ಪ್ರತಿನಿಧಿಗಳು ಹಾಗೂ ಸಾಹಿತಿಗಳನ್ನು ಬಳಸಿಕೊಂಡು ಆ ಪಕ್ಷ ಟೂಲ್ ಕಿಟ್ ಕೆಲಸ ಮಾಡುತ್ತಿದೆ. ಮಾಡಲು ಯಾವುದೇ ಕೆಲಸವಿಲ್ಲದ ಕಾರಣಕ್ಕೆ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಟ್ಟ ರಾಜಕಾರಣಕ್ಕೆ ಮುಂದಾಗಿದೆ. ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಕ್ಷೇತ್ರದ ಜನರ ಬಳಿ ಹೋಗಿ ನೆರವಿನ ಹಸ್ತ ಚಾಚುವ ಬದಲು ಆರು ತಿಂಗಳಿನಿಂದ ಟೂಲ್ ಕಿಟ್ ತಯಾರಿಕೆಯಲ್ಲಿ ತೊಡಗಿದೆ’ ಎಂದು ದೂರಿದರು.