ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ ಕೈದಿಗೆ ಕಲ್ಲಿನಿಂದ ಹಲ್ಲೆ

Last Updated 26 ಡಿಸೆಂಬರ್ 2019, 13:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊಲೆ ಆರೋಪದ ಮೇಲೆ ನಗರದ ಉಪ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನ ಮೇಲೆ, ಮತ್ತೊಬ್ಬ ಕೈದಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಬೊಮ್ಮಸಂದ್ರದ ಖಾದರಸಾಬ ಮಹಮ್ಮದಸಾಬ ಮುನಿಯಾರ್ ಎಂಬಾತ, ರಾಯನಾಳದ ಸಿದ್ದಪ್ಪ ಗದಿಗೆಪ್ಪ ಕೋಳೂರನಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಘಟನೆಯಲ್ಲಿ ಸಿದ್ದಪ್ಪ ತಲೆಗೆ ಪೆಟ್ಟಾಗಿದ್ದು, ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಕೊಲೆ ಆರೋಪದ ಮೇಲೆ ಎರಡು ವರ್ಷದಿಂದ ಜೈಲಿನಲ್ಲಿರುವ ಇಬ್ಬರೂ ಬುಧವಾರ ಸಂಜೆ ಮಾತನಾಡುತ್ತಾ ಕುಳಿತಿದ್ದರು. ಆಗ ಸಿದ್ಧಪ್ಪ, ‘ನಿನ್ನನ್ನು ನೋಡಲು ಯಾರೂ ಬರುವುದಿಲ್ಲ. ಹೀಗಾದರೆ, ನೀನು ಜೈಲಿನಲ್ಲೇ ಕೊಳೆಯಬೇಕಾಗುತ್ತದೆ’ ಎಂದು ಮುನಿಯಾರ್‌ಗೆ ಹೇಳಿದ್ದಾನೆ. ಇದರಿಂದ ಸಿಟ್ಟಾದ ಮುನಿಯಾರ್‌ ಕಲ್ಲಿನಿಂದ ಸಿದ್ದಪ್ಪನಿಗೆ ಹೊಡೆದಿದ್ದಾನೆ’ ಎಂದು ಜೈಲರ್ ಅಶೋಕ ಭಜಂತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಗಳ ಕಂಡ ಸಿಬ್ಬಂದಿ ಹಾಗೂ ಸಹ ಕೈದಿಗಳು ಇಬ್ಬರನ್ನು ಸಮಾಧಾನಪಡಿಸಿದ್ದಾರೆ. ಬಳಿಕ, ತಲೆಗೆ ಗಾಯವಾಗಿ ರಕ್ತ ಸೋರುತ್ತಿದ್ದರಿಂದ ಸಿದ್ಧಪ್ಪನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ’ ಎಂದು ಹೇಳಿದರು. ಘಟನೆ ಸಂಬಂಧ, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT