ಹುಬ್ಬಳ್ಳಿ: ಕೊಲೆ ಆರೋಪದ ಮೇಲೆ ನಗರದ ಉಪ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನ ಮೇಲೆ, ಮತ್ತೊಬ್ಬ ಕೈದಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಬೊಮ್ಮಸಂದ್ರದ ಖಾದರಸಾಬ ಮಹಮ್ಮದಸಾಬ ಮುನಿಯಾರ್ ಎಂಬಾತ, ರಾಯನಾಳದ ಸಿದ್ದಪ್ಪ ಗದಿಗೆಪ್ಪ ಕೋಳೂರನಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಘಟನೆಯಲ್ಲಿ ಸಿದ್ದಪ್ಪ ತಲೆಗೆ ಪೆಟ್ಟಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.