ಪುಸ್ತಕ ಪರಿಚಯ ಮಾಡಿದ ಡಾ. ಲತೀಫ್ ಕುನ್ನಿಭಾವಿ ‘ಪುಸ್ತಕದಲ್ಲಿ ಕಸ್ತೂರಿ ಕನ್ನಡದ ಕಂಪು ಅಡಗಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ಸಂಭಾಷಣೆಯೊಂದಿಗೆ ಆರಂಭವಾಗುವ ಹೊತ್ತಿಗೆ ಕೊನೆವರೆಗೂ ಕನ್ನಡದ ಕಾಳಜಿ ತಿಳಿಸಿಕೊಡುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನ, ಅಲ್ಲಿನ ಸಂಭ್ರಮ, ಗೋಷ್ಠಿ, ಭಾಷಣ, ಊಟ, ಸಂಸ್ಕೃತಿ, ಶಾಲೆ, ಶಿಕ್ಷಕ, ಶಾಲಾ ಸಮಿತಿ ಹೀಗೆ ಪ್ರತಿಯೊಂದರ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸುತ್ತದೆ’ ಎಂದರು.