<p><strong>ಹುಬ್ಬಳ್ಳಿ:</strong> ‘ನಾವು ಮಾಡಿದ ಕೆಲಸಗಳು ಮಾತ್ರ ಸದಾ ಜನಮಾನಸದಲ್ಲಿ ಇರುತ್ತವೆ. ಮಹಾತ್ಮರನ್ನು ಸ್ಮರಿಸುವ ಸಂಸ್ಕೃತಿ ಈ ಭಾಗದಲ್ಲಿ ಇನ್ನೂ ಉಳಿದಿದ್ದು, ಇದು ಉತ್ತಮ ಕಾರ್ಯ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.</p>.<p>ಇಲ್ಲಿನ ಉಣಕಲ್ಲನ ಸಿದ್ಧೇಶ್ವರ ಮಠದ (ಹೊಸ ಮಠ) ದ್ವಾರ ಬಾಗಿಲು ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>'ಉಣಕಲ್ಲ ಸಿದ್ದಪ್ಪಜನವರು ಶ್ರೇಷ್ಠ ಶರಣರಾಗಿದ್ದರು. ಅವರ ಇತಿಹಾಸ ದೊಡ್ಡದು. ಸಮಾಜವನ್ನು ಎಚ್ಚರಿಸಿ, ಜಾಗೃತಿ ಮೂಡಿಸಿದ್ದೇ ಮಹಾತ್ಮರ ನಿಜವಾದ ಪವಾಡ’ ಎಂದರು.</p>.<p>‘ಒಂದು ಕನಸು ಕಂಡರೆ ಅದನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಅದರಂತೆ ಇಲ್ಲಿನ ಸಿದ್ಧಪ್ಪಜ್ಜನ ಹೊಸಮಠವನ್ನು ನಿರ್ಮಾಣ ಮಾಡಲಾಗಿದೆ. ಆದಷ್ಟು ಶೀಘ್ರ ಮಠದ ಶಿಲಾ ದ್ವಾರವನ್ನು ನಿರ್ಮಿಸಬೇಕು’ ಎಂದು ಹೇಳಿದರು.</p>.<p>ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ‘ಹೊಸಮಠವನ್ನು ನಿರ್ಮಾಣ ಮಾಡಲು ಎರಡು ವರ್ಷಗಳ ಹಿಂದೆ ಸಂಕಲ್ಪ ಮಾಡಲಾಗಿತ್ತು. ಅದಕ್ಕೆ ಅನೇಕ ದಾನಿಗಳು, ಧರ್ಮಸ್ಥಳ ಸಂಘದಿಂದಲೂ ನೆರವು ಸಿಕ್ಕಿದೆ’ ಎಂದರು.</p>.<p>‘ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಶಿಕ್ಷಣ ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳ್ಲಲಿ ಸೇವೆ ಸಲ್ಲಿಸಿದ್ದಾರೆ. ಅವರು ಸಮಾಜಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನೇಕರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ’ ಎಂದು ಹೇಳಿದರು.</p>.<p>‘ಮುಂದಿನ ವರ್ಷದ ಜಾತ್ರೆ ಒಳಗಾಗಿ ಮಠದ ದ್ವಾರವನ್ನು ನಿರ್ಮಿಸಲಾಗುವುದು. ಯುಗಾದಿ ಸಂದರ್ಭದಲ್ಲಿ ಸಿದ್ಧಪ್ಪಜ್ಜನ ಜಾತ್ರೆ ಒಂದು ತಿಂಗಳು ನಡೆಯಲಿದ್ದು, 21 ದಿನ ಪ್ರವಚನ ಜರುಗಲಿದೆ. ಸಾಮೂಹಿಕ ವಿವಾಹ, ಬಯಲು ಕುಸ್ತಿ, ಅನ್ನಸಂತರ್ಪಣೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.</p>.<p>ಮಿಸ್ ಯೂನಿವರ್ಸಲ್ ಪೆಟೀಟ್–2024 ಸ್ಪರ್ಧೆಯ ವಿಜೇತರಾದ ಡಾ.ಶೃತಿ ಹೆಗಡೆ, ಕುಸ್ತಿ ಪಟು ವಿಕ್ರಂ ಚಿಲ್ಲಣ್ಣವರ, ಕೊಕ್ಕೊ ಪಟು ಖುಷಿ ಮತ್ತು ಮಠಕ್ಕೆ ದೇಣಿಗೆ ನೀಡಿದ ಭಕ್ತರನ್ನು ಸನ್ಮಾನಿಸಲಾಯಿತು.</p>.<p>ವಿಶ್ವನಾಥ ಕೊರವಿ ಸ್ವಾಗತಿಸಿದರು. ರಾಮಣ್ಣ ಪದ್ಮಣ್ಣವರ, ಗುರು ಎಂಜಿನಿಯರ್, ಗುರುಸಿದ್ಧಪ್ಪ ಮೆಣಸಿನಕಾಯಿ, ದಯಾಶೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ನಾವು ಮಾಡಿದ ಕೆಲಸಗಳು ಮಾತ್ರ ಸದಾ ಜನಮಾನಸದಲ್ಲಿ ಇರುತ್ತವೆ. ಮಹಾತ್ಮರನ್ನು ಸ್ಮರಿಸುವ ಸಂಸ್ಕೃತಿ ಈ ಭಾಗದಲ್ಲಿ ಇನ್ನೂ ಉಳಿದಿದ್ದು, ಇದು ಉತ್ತಮ ಕಾರ್ಯ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.</p>.<p>ಇಲ್ಲಿನ ಉಣಕಲ್ಲನ ಸಿದ್ಧೇಶ್ವರ ಮಠದ (ಹೊಸ ಮಠ) ದ್ವಾರ ಬಾಗಿಲು ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>'ಉಣಕಲ್ಲ ಸಿದ್ದಪ್ಪಜನವರು ಶ್ರೇಷ್ಠ ಶರಣರಾಗಿದ್ದರು. ಅವರ ಇತಿಹಾಸ ದೊಡ್ಡದು. ಸಮಾಜವನ್ನು ಎಚ್ಚರಿಸಿ, ಜಾಗೃತಿ ಮೂಡಿಸಿದ್ದೇ ಮಹಾತ್ಮರ ನಿಜವಾದ ಪವಾಡ’ ಎಂದರು.</p>.<p>‘ಒಂದು ಕನಸು ಕಂಡರೆ ಅದನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಅದರಂತೆ ಇಲ್ಲಿನ ಸಿದ್ಧಪ್ಪಜ್ಜನ ಹೊಸಮಠವನ್ನು ನಿರ್ಮಾಣ ಮಾಡಲಾಗಿದೆ. ಆದಷ್ಟು ಶೀಘ್ರ ಮಠದ ಶಿಲಾ ದ್ವಾರವನ್ನು ನಿರ್ಮಿಸಬೇಕು’ ಎಂದು ಹೇಳಿದರು.</p>.<p>ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ‘ಹೊಸಮಠವನ್ನು ನಿರ್ಮಾಣ ಮಾಡಲು ಎರಡು ವರ್ಷಗಳ ಹಿಂದೆ ಸಂಕಲ್ಪ ಮಾಡಲಾಗಿತ್ತು. ಅದಕ್ಕೆ ಅನೇಕ ದಾನಿಗಳು, ಧರ್ಮಸ್ಥಳ ಸಂಘದಿಂದಲೂ ನೆರವು ಸಿಕ್ಕಿದೆ’ ಎಂದರು.</p>.<p>‘ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಶಿಕ್ಷಣ ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳ್ಲಲಿ ಸೇವೆ ಸಲ್ಲಿಸಿದ್ದಾರೆ. ಅವರು ಸಮಾಜಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನೇಕರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ’ ಎಂದು ಹೇಳಿದರು.</p>.<p>‘ಮುಂದಿನ ವರ್ಷದ ಜಾತ್ರೆ ಒಳಗಾಗಿ ಮಠದ ದ್ವಾರವನ್ನು ನಿರ್ಮಿಸಲಾಗುವುದು. ಯುಗಾದಿ ಸಂದರ್ಭದಲ್ಲಿ ಸಿದ್ಧಪ್ಪಜ್ಜನ ಜಾತ್ರೆ ಒಂದು ತಿಂಗಳು ನಡೆಯಲಿದ್ದು, 21 ದಿನ ಪ್ರವಚನ ಜರುಗಲಿದೆ. ಸಾಮೂಹಿಕ ವಿವಾಹ, ಬಯಲು ಕುಸ್ತಿ, ಅನ್ನಸಂತರ್ಪಣೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.</p>.<p>ಮಿಸ್ ಯೂನಿವರ್ಸಲ್ ಪೆಟೀಟ್–2024 ಸ್ಪರ್ಧೆಯ ವಿಜೇತರಾದ ಡಾ.ಶೃತಿ ಹೆಗಡೆ, ಕುಸ್ತಿ ಪಟು ವಿಕ್ರಂ ಚಿಲ್ಲಣ್ಣವರ, ಕೊಕ್ಕೊ ಪಟು ಖುಷಿ ಮತ್ತು ಮಠಕ್ಕೆ ದೇಣಿಗೆ ನೀಡಿದ ಭಕ್ತರನ್ನು ಸನ್ಮಾನಿಸಲಾಯಿತು.</p>.<p>ವಿಶ್ವನಾಥ ಕೊರವಿ ಸ್ವಾಗತಿಸಿದರು. ರಾಮಣ್ಣ ಪದ್ಮಣ್ಣವರ, ಗುರು ಎಂಜಿನಿಯರ್, ಗುರುಸಿದ್ಧಪ್ಪ ಮೆಣಸಿನಕಾಯಿ, ದಯಾಶೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>