ಪ್ರತಿಭಟನಾಕಾರರನ್ನು ಪೊಲೀಸರು ತೆರವುಗೊಳಿಸಲು ಮುಂದಾದಾಗ ಪರಸ್ಪರ ವಾಗ್ವಾದ ನಡೆಯಿತು. ನಂತರ ಪಾಲಿಕೆ ಅಧಿಕಾರಿಗಳು ಬಂದು ಮನವೊಲಿಸಲು ಮುಂದಾದರು. ಅದಕ್ಕೂ ಒಪ್ಪದಿದ್ದಾಗ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದರು. ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯ ಇಸ್ಮಾಯಿಲ್ ಬಿಳಿಪ್ರಸಾದ, ರಿಯಾಜ್ ದಲಾಯತ್, ಜಾವಿದ್ ಟೀನ್ವಾಲೆ, ಪ್ರಕಾಶ ಗದಗಿನಮಠ, ಲಕ್ಷ್ಮೀ ವಾಲಿ, ಕವಿತಾ ದೊಡ್ಡವಾಡ ಇದ್ದರು.