ಪಾಲಿಕೆ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿರುವ ಅವರು, ‘ಹಸ್ತಾಂತರಿಸಲು ನಿರ್ಧರಿಸಿರುವ ಉದ್ದೇಶಿತ ಜಾಗದಲ್ಲಿ ಬ್ರಹ್ಮಲಿಂಗೇಶ್ವರ, ಬನ್ನಿ ಮಹಾಕಾಳಿ, ವೀರಭದ್ರೇಶ್ವರ, ಹೇಮಂತರ, ಮರಗಮ್ಮ ಗ್ರಾಮ ದೇವತೆ, ಮೈಲಾರಲಿಂಗ, ವೀರ ಹನುಮಾನ, ಕರಿಯಮ್ಮ, ಗಣಪತಿ ದೇವಸ್ಥಾನ ಹಾಗೂ ಶಾಲೆ ಇವೆ. ಅಲ್ಲಿ ಹಜ್ ಭವನ ನಿರ್ಮಾಣವಾದರೆ ಅನೇಕ ವರ್ಷಗಳಿಂದ ಆಚರಿಸುತ್ತ ಬಂದಿರುವ ಹಬ್ಬ, ಉತ್ಸವಗಳಿಗೆ ತೊಂದರೆಯಾಗಲಿದೆ. ಇದರಿಂದ ಗಲಭೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದ್ದಾರೆ.