‘ಜೋರಾಗಿ ಮಳೆ ಬಂದು ಒಳಚರಂಡಿಯ ನೀರು ಮನೆಗೆಲ್ಲ ನುಗ್ಗಿದ್ದರಿಂದ ನಾಲ್ಕೈದು ಕುಟುಂಬಗಳ ಸದಸ್ಯರು ರಾತ್ರಿಪೂರ್ತಿ ಜಾಗರಣೆ ಮಾಡಬೇಕಾಯಿತು. ಜೋರಾಗಿ ಮಳೆ ಬಂದಾಗಲೆಲ್ಲ ಈ ಸಮಸ್ಯೆಯಾಗುತ್ತಿದೆ. ಒಳಚರಂಡಿ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ, ವೇಗವಾಗಿ ಕೆಲಸ ಮುಗಿಸಿದ್ದರೆ ನಮಗೆ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ’ ಎಂದು ಲಕ್ಷ್ಮೇಶ್ವರ ಚಾಳದ ನಿವಾಸಿ ರಿಯಾಜ್ ಅಹ್ಮದ್ ನದಾಫ್ ಹೇಳಿದರು.