<p><strong>ಹುಬ್ಬಳ್ಳಿ:</strong> ಸ್ವಾಮೀಜಿಗಳಿಗೆ ರಾಜಕಾರಣದ ವಿಷಯ ಏಕೆ ಬೇಕು; ಅವರು ಹೀಗೆ ಮಾಡುವುದರಿಂದ ಅಭಿವೃದ್ಧಿಗೆ ತೊಡಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.</p>.<p>ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿಗೆ ಒತ್ತಡ ಹೇರಿದ ಹಿನ್ನೆಲೆಯ ಕುರಿತು ರಸ್ತೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಹೊರಟ್ಟಿ ‘ಸ್ವಾಮೀಜಿಗಳ ಮಾತಿಗೆ ಕಟ್ಟು ಬಿದ್ದರೆ ಅಧಿಕಾರ ನಡೆಸುವುದು ಮುಖ್ಯಮಂತ್ರಿಗೆ ಕಷ್ಟವಾಗುತ್ತದೆ’ ಎಂದರು.</p>.<p>ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿ ‘ತಮ್ಮ ಸಮಾಜದ ನಾಯಕರನ್ನು ಸಚಿವರನ್ನಾಗಿ ಮಾಡಿ ಎಂದು ಬೇಡಿಕೆ ಸಲ್ಲಿಸಬಹುದೇ ವಿನಃ ಒತ್ತಡ ಹೇರುವುದು ಸರಿಯಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ಪರಮಾಧಿಕಾರ’ ಎಂದರು.</p>.<p>‘ಬೇರೆ ಪಕ್ಷಗಳಿಂದ ಬಂದವರಿಂದಲೇ ನಮಗೆ ಅಧಿಕಾರ ಸಿಕ್ಕಿದೆ. ಹೊಸದಾಗಿ ಆರಿಸಿ ಬಂದವರಿಗೆ ಸಚಿವ ಸ್ಥಾನ ಕೊಡಲೇಬೇಕು. ಉಳಿದವರಿಗೆ ಬೇರೆ ಸಂದರ್ಭದಲ್ಲಿ ಅವಕಾಶ ಸಿಗುತ್ತದೆ’ ಎಂದರು.</p>.<p>‘ಎಲ್ಲ ಸಮಾಜಗಳ ಜನ ತಮ್ಮ ಸಮಾಜದವರನ್ನು ಸಚಿವರನ್ನಾಗಿ ಮಾಡಿ ಎಂದು ಆಸೆ ವ್ಯಕ್ತಪಡಿಸುವುದು ಸಹಜ. ಆದರೆ, ಇಂಥವರನ್ನೇ ಸಚಿವರನ್ನಾಗಿ ಮಾಡದಿದ್ದರೆ ನಿಮ್ಮ ಕೈ ಬಿಡುತ್ತೇವೆ ಎಂದು ಹೇಳಿಕೆ ನೀಡುವುದು ಅಪಾರ್ಥಕ್ಕೆ ಕಾರಣವಾಗುತ್ತದೆ’ ಎಂದರು.</p>.<p>‘ಮಂಗಳವಾರದ ಘಟನೆಗೆ ಸೀಮಿತವಾಗಿಯಷ್ಟೇ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಕಿಲ್ಲ. ಎಲ್ಲರ ಸಲಹೆ ಪಡೆದು ಸಂಪುಟ ವಿಸ್ತರಣೆ ಮಾಡುತ್ತಾರೆ. ಮುಖ್ಯಮಂತ್ರಿಗೆ ಸಹಜವಾಗಿ ಒತ್ತಡವಿದ್ದೇ ಇರುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಸ್ವಾಮೀಜಿಗಳಿಗೆ ರಾಜಕಾರಣದ ವಿಷಯ ಏಕೆ ಬೇಕು; ಅವರು ಹೀಗೆ ಮಾಡುವುದರಿಂದ ಅಭಿವೃದ್ಧಿಗೆ ತೊಡಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.</p>.<p>ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿಗೆ ಒತ್ತಡ ಹೇರಿದ ಹಿನ್ನೆಲೆಯ ಕುರಿತು ರಸ್ತೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಹೊರಟ್ಟಿ ‘ಸ್ವಾಮೀಜಿಗಳ ಮಾತಿಗೆ ಕಟ್ಟು ಬಿದ್ದರೆ ಅಧಿಕಾರ ನಡೆಸುವುದು ಮುಖ್ಯಮಂತ್ರಿಗೆ ಕಷ್ಟವಾಗುತ್ತದೆ’ ಎಂದರು.</p>.<p>ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿ ‘ತಮ್ಮ ಸಮಾಜದ ನಾಯಕರನ್ನು ಸಚಿವರನ್ನಾಗಿ ಮಾಡಿ ಎಂದು ಬೇಡಿಕೆ ಸಲ್ಲಿಸಬಹುದೇ ವಿನಃ ಒತ್ತಡ ಹೇರುವುದು ಸರಿಯಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ಪರಮಾಧಿಕಾರ’ ಎಂದರು.</p>.<p>‘ಬೇರೆ ಪಕ್ಷಗಳಿಂದ ಬಂದವರಿಂದಲೇ ನಮಗೆ ಅಧಿಕಾರ ಸಿಕ್ಕಿದೆ. ಹೊಸದಾಗಿ ಆರಿಸಿ ಬಂದವರಿಗೆ ಸಚಿವ ಸ್ಥಾನ ಕೊಡಲೇಬೇಕು. ಉಳಿದವರಿಗೆ ಬೇರೆ ಸಂದರ್ಭದಲ್ಲಿ ಅವಕಾಶ ಸಿಗುತ್ತದೆ’ ಎಂದರು.</p>.<p>‘ಎಲ್ಲ ಸಮಾಜಗಳ ಜನ ತಮ್ಮ ಸಮಾಜದವರನ್ನು ಸಚಿವರನ್ನಾಗಿ ಮಾಡಿ ಎಂದು ಆಸೆ ವ್ಯಕ್ತಪಡಿಸುವುದು ಸಹಜ. ಆದರೆ, ಇಂಥವರನ್ನೇ ಸಚಿವರನ್ನಾಗಿ ಮಾಡದಿದ್ದರೆ ನಿಮ್ಮ ಕೈ ಬಿಡುತ್ತೇವೆ ಎಂದು ಹೇಳಿಕೆ ನೀಡುವುದು ಅಪಾರ್ಥಕ್ಕೆ ಕಾರಣವಾಗುತ್ತದೆ’ ಎಂದರು.</p>.<p>‘ಮಂಗಳವಾರದ ಘಟನೆಗೆ ಸೀಮಿತವಾಗಿಯಷ್ಟೇ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಕಿಲ್ಲ. ಎಲ್ಲರ ಸಲಹೆ ಪಡೆದು ಸಂಪುಟ ವಿಸ್ತರಣೆ ಮಾಡುತ್ತಾರೆ. ಮುಖ್ಯಮಂತ್ರಿಗೆ ಸಹಜವಾಗಿ ಒತ್ತಡವಿದ್ದೇ ಇರುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>