‘ವ್ಯವಸ್ಥೆ ತಿರಸ್ಕರಿಸಿದಾಗ ತೊಂದರೆ’: ‘ಯಾವುದೇ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಸಂಭವಿಸಿದಾಗ ವ್ಯವಧಾನ ಅಗತ್ಯ. ಸಣ್ಣಪುಟ್ಟ ಸಮಸ್ಯೆ ಆಯಿತೆಂದು ನಾವೇ ಕಟ್ಟಿಕೊಂಡ ವ್ಯವಸ್ಥೆ ತಿರಸ್ಕರಿಸಿದರೆ, ಹೆಚ್ಚು ತೊಂದರೆ ಅನುಭವಿಸುವುದು ನಾವೇ ಎಂಬ ಅರಿವು ಮುಖ್ಯ. ನಾವು ನಂಬಿರುವ ತತ್ವಕ್ಕೆ ಬದ್ಧರಾಗಿ ನಡೆಯುವಾಗ, ಅದಕ್ಕೆ ವಿರುದ್ಧವಾಗಿ ಎದುರಾಗುವ ಸತ್ಯ ಮತ್ತು ಸಾಕ್ಷಿಯನ್ನು ಸಹ ಒಪ್ಪಿಕೊಳ್ಳಬೇಕಾಗುತ್ತದೆ. ಅದಕ್ಕೆ ವಿಶಾಲ ಮನೋಭಾವ ಅಗತ್ಯ’ ಎಂದು ಪ್ರಕಾಶ ಬೆಳವಾಡಿ ಅಭಿಪ್ರಾಯಪಟ್ಟರು.