ಹುಬ್ಬಳ್ಳಿ: ಚೇತನ ಪ್ರಕಾಶನ ಹಾಗೂ ಓ ಮನಸೇ ಪಾಕ್ಷಿಕ ಪತ್ರಿಕೆ ಆಯೋಜಿಸಿರುವ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನ ನಗರದಲ್ಲಿ ಆರಂಭವಾಗಿದೆ.
ಬೆಳಿಗ್ಗೆ 8.45ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ 11.50ಕ್ಕೆ ಆರಂಭವಾಯಿತು.‘ಓ ಮನಸೇ’ಸಹ ಸಂಪಾದಕಿ ಭಾವನಾ ಬೆಳಗೆರೆ ಸಮ್ಮೇಳನಉದ್ಘಾಟಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡ್ರ ಸಮ್ಮೇಳನದ ಆಧ್ಯಕ್ಷೆಯಾಗಿದ್ದಾರೆ. ಪತ್ರಕರ್ತ ರವಿ ಬೆಳಗೆರೆ, ವೈದ್ಯ ಆನಂದ ಪಾಂಡುರಂಗಿ ಭಾಗಿಯಾಗಿದ್ದಾರೆ.