ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯ ಭಾಗವಹಿಸುವಿಕೆ ಮುಖ್ಯ: ಪೀಟರ್

Last Updated 20 ಮಾರ್ಚ್ 2023, 5:29 IST
ಅಕ್ಷರ ಗಾತ್ರ

ಅಳ್ನಾವರ: ‘ಸಮಾಜ ಪ್ರಗತಿಗೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ’ ಎಂದು ಧಾರವಾಡದ ಬಿಡಿಎಸ್‌ಎಸ್ ಸಂಸ್ಥೆಯ ನಿರ್ದೇಶಕ ಪೀಟರ್ ಹೇಳಿದರು.

ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ, ಕಾರಿತಾಸ ಇಂಡಿಯಾ ಸಂಸ್ಥೆ ಹಾಗೂ ಮಹಿಳಾ ಮಂಡಳದ ಸಹಯೋಗದಲ್ಲಿ ಉಜ್ಜೀವಿನಿ ಯೋಜನೆಯಡಿ ಡೋರಿ ಗ್ರಾಮದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡೋರಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ದೇವೇಂದ್ರ ಖಾನಾಪುರ ಮಾತನಾಡಿ, ಸರ್ಕಾರ ಮಹಿಳೆಯರಿಗೆ ಹಲವು ಯೋಜನೆಗಳನ್ನು ನೀಡಿದೆ. ಅವುಗಳ ಸದುಪಯೋಗ ಪಡೆದುಕೊಂಡು ಪ್ರಗತಿ ಸಾಧಿಸಬೇಕು ಎಂದರು.

ಬಿಡಿಎಸ್‌ಎಸ್ ಸಂಸ್ಥೆಯ ಉಜ್ಜೀವಿನಿ ಯೋಜನೆಯ ಸಂಯೋಜಕ ಎ.ಬಿ. ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಣಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಕದಂ, ಪಿಡಿಒ ಸುಜಾತಾ ಕೊಪ್ಪದ, ದಾಕ್ಷಾಯಣಿ ಗೋವೆಕರ, ಯಲ್ಲವ್ವ ನಾಯ್ಕರ, ಅಲ್ಲಾಭಕ್ಷ ಬಡಗಿ, ಸುಲೆಮಾನ ಪಾಟೀಲ, ಮಂಜುಳಾ ಹುಂಡೇಕರ, ಶಾರದಾ ಧಾರವಾಡ ಇದ್ದರು.

ಶೈಲಾ ಹಿರೇಮಠ ಸ್ವಾಗತಿಸಿದರು. ರಾಧಾ ಕಮಚಿಕೊಪ್ಪ ನಿರೂಪಿಸಿದರು. ಶಾಂತಾ ಕಾಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT