<p><strong>ಅಳ್ನಾವರ:</strong> ‘ಸಮಾಜ ಪ್ರಗತಿಗೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ’ ಎಂದು ಧಾರವಾಡದ ಬಿಡಿಎಸ್ಎಸ್ ಸಂಸ್ಥೆಯ ನಿರ್ದೇಶಕ ಪೀಟರ್ ಹೇಳಿದರು.</p>.<p>ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ, ಕಾರಿತಾಸ ಇಂಡಿಯಾ ಸಂಸ್ಥೆ ಹಾಗೂ ಮಹಿಳಾ ಮಂಡಳದ ಸಹಯೋಗದಲ್ಲಿ ಉಜ್ಜೀವಿನಿ ಯೋಜನೆಯಡಿ ಡೋರಿ ಗ್ರಾಮದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಡೋರಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ದೇವೇಂದ್ರ ಖಾನಾಪುರ ಮಾತನಾಡಿ, ಸರ್ಕಾರ ಮಹಿಳೆಯರಿಗೆ ಹಲವು ಯೋಜನೆಗಳನ್ನು ನೀಡಿದೆ. ಅವುಗಳ ಸದುಪಯೋಗ ಪಡೆದುಕೊಂಡು ಪ್ರಗತಿ ಸಾಧಿಸಬೇಕು ಎಂದರು.</p>.<p>ಬಿಡಿಎಸ್ಎಸ್ ಸಂಸ್ಥೆಯ ಉಜ್ಜೀವಿನಿ ಯೋಜನೆಯ ಸಂಯೋಜಕ ಎ.ಬಿ. ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಬೆಣಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಕದಂ, ಪಿಡಿಒ ಸುಜಾತಾ ಕೊಪ್ಪದ, ದಾಕ್ಷಾಯಣಿ ಗೋವೆಕರ, ಯಲ್ಲವ್ವ ನಾಯ್ಕರ, ಅಲ್ಲಾಭಕ್ಷ ಬಡಗಿ, ಸುಲೆಮಾನ ಪಾಟೀಲ, ಮಂಜುಳಾ ಹುಂಡೇಕರ, ಶಾರದಾ ಧಾರವಾಡ ಇದ್ದರು.</p>.<p>ಶೈಲಾ ಹಿರೇಮಠ ಸ್ವಾಗತಿಸಿದರು. ರಾಧಾ ಕಮಚಿಕೊಪ್ಪ ನಿರೂಪಿಸಿದರು. ಶಾಂತಾ ಕಾಳೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳ್ನಾವರ:</strong> ‘ಸಮಾಜ ಪ್ರಗತಿಗೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ’ ಎಂದು ಧಾರವಾಡದ ಬಿಡಿಎಸ್ಎಸ್ ಸಂಸ್ಥೆಯ ನಿರ್ದೇಶಕ ಪೀಟರ್ ಹೇಳಿದರು.</p>.<p>ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ, ಕಾರಿತಾಸ ಇಂಡಿಯಾ ಸಂಸ್ಥೆ ಹಾಗೂ ಮಹಿಳಾ ಮಂಡಳದ ಸಹಯೋಗದಲ್ಲಿ ಉಜ್ಜೀವಿನಿ ಯೋಜನೆಯಡಿ ಡೋರಿ ಗ್ರಾಮದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಡೋರಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ದೇವೇಂದ್ರ ಖಾನಾಪುರ ಮಾತನಾಡಿ, ಸರ್ಕಾರ ಮಹಿಳೆಯರಿಗೆ ಹಲವು ಯೋಜನೆಗಳನ್ನು ನೀಡಿದೆ. ಅವುಗಳ ಸದುಪಯೋಗ ಪಡೆದುಕೊಂಡು ಪ್ರಗತಿ ಸಾಧಿಸಬೇಕು ಎಂದರು.</p>.<p>ಬಿಡಿಎಸ್ಎಸ್ ಸಂಸ್ಥೆಯ ಉಜ್ಜೀವಿನಿ ಯೋಜನೆಯ ಸಂಯೋಜಕ ಎ.ಬಿ. ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಬೆಣಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಕದಂ, ಪಿಡಿಒ ಸುಜಾತಾ ಕೊಪ್ಪದ, ದಾಕ್ಷಾಯಣಿ ಗೋವೆಕರ, ಯಲ್ಲವ್ವ ನಾಯ್ಕರ, ಅಲ್ಲಾಭಕ್ಷ ಬಡಗಿ, ಸುಲೆಮಾನ ಪಾಟೀಲ, ಮಂಜುಳಾ ಹುಂಡೇಕರ, ಶಾರದಾ ಧಾರವಾಡ ಇದ್ದರು.</p>.<p>ಶೈಲಾ ಹಿರೇಮಠ ಸ್ವಾಗತಿಸಿದರು. ರಾಧಾ ಕಮಚಿಕೊಪ್ಪ ನಿರೂಪಿಸಿದರು. ಶಾಂತಾ ಕಾಳೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>