<p><strong>ಧಾರವಾಡ:</strong> `ಭಗವಂತನ ಸೃಷ್ಟಿಯಲ್ಲಿ ಅಂಗವೈಕಲ್ಯಕ್ಕೆ ಒಳಗಾಗುವುದು ಸಹಜ. ಕೆಲವರಿಗೆ ಹುಟ್ಟಿನಿಂದಲೇ ಅಂಗವೈಕಲ್ಯ ವಿದ್ದರೆ, ಕೆಲವರಿಗೆ ಜೀವನದ ಹಲವಾರು ಘಟ್ಟಗಳಲ್ಲಿ ಅಂಗವಿಕಲತೆ ಉಂಟಾಗಬಹುದು. ಆದರೆ ಅಂಗವಿಕಲತೆ ಎನ್ನುವುದು ಶಾಪಗ್ರಸ್ಥತೆ ಅಲ್ಲ~ ಎಂದು ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. <br /> <br /> ಇಲ್ಲಿನ ಜೆಎಸ್ಎಸ್ ಕಾಲೇಜಿನ ಉತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ನ.ವಜ್ರಕುಮಾರ ಅಭಿನಂದನ ಪುರಸ್ಕಾರ ಪ್ರಶಸ್ತಿಯನ್ನು ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಪ್ರದಾನ ಮಾಡಿ ಮಾತನಾಡಿದ ಅವರು, ಅಂಗವಿಕಲರಿಗೂ ಸಮಾಜದಲ್ಲಿ ಬದುಕುವ ಹಕ್ಕಿದೆ.<br /> <br /> ಹೊರಗಿನ ದೃಷ್ಟಿಗಿಂತ ಅವರ ಅಂತರಂಗದ ದೃಷ್ಟಿ ಹೆಚ್ಚು ಜಾಗೃತವಾಗಿರುತ್ತದೆ. ಅವರಲ್ಲಿ ಏಕಾಗ್ರತೆ ಅಧಿಕವಾಗಿರುತ್ತದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಅಂಗವಿಕಲರ ಸ್ಥಿತಿ ಚಿಂತಾಜನಕ ವಾಗಿರುತ್ತದೆ. ಬಹಳ ಹೀನಾಯ ಸ್ಥಿತಿಯಲ್ಲಿ ನಿಕೃಷ್ಟಭಾವ ದಿಂದ ಅವರನ್ನು ಕಾಣಲಾಗುತ್ತದೆ.<br /> <br /> ಅಂಗವಿಕಲರನ್ನು ಸಾಕು ವುದೇ ಕಷ್ಟದಾಯಕ ಎಂಬ ಭಾವನೆ ಇದೆ. ಇವತ್ತು ಆಧುನಿಕ ತಂತ್ರಜ್ಞಾನದ ವಾಹಿನಿಗೆ ಅಂಗವಿಕಲರನ್ನು ತರುವ ಪ್ರಯತ್ನ ಆಗಬೇಕಾಗಿದೆ. ವಿದೇಶಗಳಲ್ಲಿ ಅಂಗವಿಕಲರಿಗಾಗಿಯೇ ಪ್ರತ್ಯೇಕ ಸಂಚಾರ, ಶೌಚಾಲಯದ ವ್ಯವಸ್ಥೆ ಹಾಗೂ ಇನ್ನಿತರ ಸೌಲಭ್ಯಗಳು ಕಡ್ಡಾಯವಾಗಿರುವುದನ್ನು ಕಾಣಬಹುದು. <br /> <br /> ನಮ್ಮಲ್ಲಿಯೂ ಆ ರೀತಿಯ ವ್ಯವಸ್ಥೆ ಜಾರಿಗೆ ಬರಬೇಕಿದೆ ಎಂದು ಹೇಳಿದರು. ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಮಹಾಂತೇಶ ಜಿ.ಕಿವಡಸಣ್ಣವರ ಪ್ರಶಸ್ತಿ ಸ್ವೀಕರಿಸಿ, ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಆದ ಆನಂದಕ್ಕಿಂತ ಮಿಗಿಲಾದ ಸಂತೋಷ ಈ ಪ್ರಶಸ್ತಿಯಿಂದ ಆಗಿದೆ ಎಂದು ಹೇಳಿದರು. <br /> <br /> ಹೆಗ್ಗಡೆ ಯವರ ಆಶೀರ್ವಾದದ ರೂಪದಲ್ಲಿ ಈ ಪ್ರಶಸ್ತಿ ಪಡೆದಿರುವುದು ನನ್ನ ಸೌಭಾಗ್ಯ. ಇದು ತಮ್ಮ ಕೆಲಸದ ಜವಾ ಬ್ದಾರಿಯನ್ನು ಹೆಚ್ಚಿಸಿದೆ ಎಂದ ಅವರು, ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಹೆಗ್ಗಡೆ ಅವರಿಂದ 5 ಲಕ್ಷ ರೂ. ಆಶೀರ್ವಾದ ಬಂದಿದೆ. ತಮ್ಮ ಸಂಸ್ಥೆಯ ಮೇಲೆ ಮಂಜುನಾಥಸ್ವಾಮಿಯ ಹಾಗೂ ಹೆಗ್ಗಡೆಯವರ ಆಶೀರ್ವಾದ ಸದಾಕಾಲವಿರಲಿ ಎಂದು ಬಯಸಿದರು. <br /> <br /> ಪುರಸ್ಕಾರ ಸಮಿತಿ ಸಂಯೋಜನ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಸ್ವಾಗತಿಸಿ, ಕಳೆದ 11 ವರ್ಷಗಳಿಂದ ನಿರಂತರ ವಾಗಿ ಸಾಗಿ ಬಂದಿರುವ ಈ ಪ್ರಶಸ್ತಿ ಪುರಸ್ಕಾರವು ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಗಳಿಗೆ ಅಥವಾ ಸಂಸ್ಥೆಗಳಿಗೆ ನೀಡುತ್ತ ಬರಲಾಗಿದೆ. ಪ್ರಶಸ್ತಿಯು 25,000 ರೂ. ನಗದು, ಪರ್ಯಾಯ ಫಲಕ ಒಳಗೊಂಡಿದೆ ಎಂದರು. <br /> <br /> ಡಾ. ನ.ವಜ್ರಕುಮಾರ, ಸುಮನ್ ವಜ್ರಕುಮಾರ, ಡಾ. ಸುಭಾಸ ಜೋಶಿ ವೇದಿಕೆಯಲ್ಲಿದ್ದರು. ಜೆ.ಕೆ.ಶೆಟ್ಟಿ ಪ್ರಶಸ್ತಿ ಪತ್ರ ಓದಿದರು. ಪಾರ್ಶ್ವನಾಥ ಶೆಟ್ಟಿ ವಂದಿಸಿದರು. ಡಾ. ಜಿನ ದತ್ತ ಹಡಗಲಿ ನಿರೂಪಿಸಿದರು. ನಂತರ ಸಮರ್ಥನಂ ಸಂಸ್ಥೆಯ ವಿಕಲಚೇತನ ಮಕ್ಕಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> `ಭಗವಂತನ ಸೃಷ್ಟಿಯಲ್ಲಿ ಅಂಗವೈಕಲ್ಯಕ್ಕೆ ಒಳಗಾಗುವುದು ಸಹಜ. ಕೆಲವರಿಗೆ ಹುಟ್ಟಿನಿಂದಲೇ ಅಂಗವೈಕಲ್ಯ ವಿದ್ದರೆ, ಕೆಲವರಿಗೆ ಜೀವನದ ಹಲವಾರು ಘಟ್ಟಗಳಲ್ಲಿ ಅಂಗವಿಕಲತೆ ಉಂಟಾಗಬಹುದು. ಆದರೆ ಅಂಗವಿಕಲತೆ ಎನ್ನುವುದು ಶಾಪಗ್ರಸ್ಥತೆ ಅಲ್ಲ~ ಎಂದು ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. <br /> <br /> ಇಲ್ಲಿನ ಜೆಎಸ್ಎಸ್ ಕಾಲೇಜಿನ ಉತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ನ.ವಜ್ರಕುಮಾರ ಅಭಿನಂದನ ಪುರಸ್ಕಾರ ಪ್ರಶಸ್ತಿಯನ್ನು ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಪ್ರದಾನ ಮಾಡಿ ಮಾತನಾಡಿದ ಅವರು, ಅಂಗವಿಕಲರಿಗೂ ಸಮಾಜದಲ್ಲಿ ಬದುಕುವ ಹಕ್ಕಿದೆ.<br /> <br /> ಹೊರಗಿನ ದೃಷ್ಟಿಗಿಂತ ಅವರ ಅಂತರಂಗದ ದೃಷ್ಟಿ ಹೆಚ್ಚು ಜಾಗೃತವಾಗಿರುತ್ತದೆ. ಅವರಲ್ಲಿ ಏಕಾಗ್ರತೆ ಅಧಿಕವಾಗಿರುತ್ತದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಅಂಗವಿಕಲರ ಸ್ಥಿತಿ ಚಿಂತಾಜನಕ ವಾಗಿರುತ್ತದೆ. ಬಹಳ ಹೀನಾಯ ಸ್ಥಿತಿಯಲ್ಲಿ ನಿಕೃಷ್ಟಭಾವ ದಿಂದ ಅವರನ್ನು ಕಾಣಲಾಗುತ್ತದೆ.<br /> <br /> ಅಂಗವಿಕಲರನ್ನು ಸಾಕು ವುದೇ ಕಷ್ಟದಾಯಕ ಎಂಬ ಭಾವನೆ ಇದೆ. ಇವತ್ತು ಆಧುನಿಕ ತಂತ್ರಜ್ಞಾನದ ವಾಹಿನಿಗೆ ಅಂಗವಿಕಲರನ್ನು ತರುವ ಪ್ರಯತ್ನ ಆಗಬೇಕಾಗಿದೆ. ವಿದೇಶಗಳಲ್ಲಿ ಅಂಗವಿಕಲರಿಗಾಗಿಯೇ ಪ್ರತ್ಯೇಕ ಸಂಚಾರ, ಶೌಚಾಲಯದ ವ್ಯವಸ್ಥೆ ಹಾಗೂ ಇನ್ನಿತರ ಸೌಲಭ್ಯಗಳು ಕಡ್ಡಾಯವಾಗಿರುವುದನ್ನು ಕಾಣಬಹುದು. <br /> <br /> ನಮ್ಮಲ್ಲಿಯೂ ಆ ರೀತಿಯ ವ್ಯವಸ್ಥೆ ಜಾರಿಗೆ ಬರಬೇಕಿದೆ ಎಂದು ಹೇಳಿದರು. ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಮಹಾಂತೇಶ ಜಿ.ಕಿವಡಸಣ್ಣವರ ಪ್ರಶಸ್ತಿ ಸ್ವೀಕರಿಸಿ, ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಆದ ಆನಂದಕ್ಕಿಂತ ಮಿಗಿಲಾದ ಸಂತೋಷ ಈ ಪ್ರಶಸ್ತಿಯಿಂದ ಆಗಿದೆ ಎಂದು ಹೇಳಿದರು. <br /> <br /> ಹೆಗ್ಗಡೆ ಯವರ ಆಶೀರ್ವಾದದ ರೂಪದಲ್ಲಿ ಈ ಪ್ರಶಸ್ತಿ ಪಡೆದಿರುವುದು ನನ್ನ ಸೌಭಾಗ್ಯ. ಇದು ತಮ್ಮ ಕೆಲಸದ ಜವಾ ಬ್ದಾರಿಯನ್ನು ಹೆಚ್ಚಿಸಿದೆ ಎಂದ ಅವರು, ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಹೆಗ್ಗಡೆ ಅವರಿಂದ 5 ಲಕ್ಷ ರೂ. ಆಶೀರ್ವಾದ ಬಂದಿದೆ. ತಮ್ಮ ಸಂಸ್ಥೆಯ ಮೇಲೆ ಮಂಜುನಾಥಸ್ವಾಮಿಯ ಹಾಗೂ ಹೆಗ್ಗಡೆಯವರ ಆಶೀರ್ವಾದ ಸದಾಕಾಲವಿರಲಿ ಎಂದು ಬಯಸಿದರು. <br /> <br /> ಪುರಸ್ಕಾರ ಸಮಿತಿ ಸಂಯೋಜನ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಸ್ವಾಗತಿಸಿ, ಕಳೆದ 11 ವರ್ಷಗಳಿಂದ ನಿರಂತರ ವಾಗಿ ಸಾಗಿ ಬಂದಿರುವ ಈ ಪ್ರಶಸ್ತಿ ಪುರಸ್ಕಾರವು ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಗಳಿಗೆ ಅಥವಾ ಸಂಸ್ಥೆಗಳಿಗೆ ನೀಡುತ್ತ ಬರಲಾಗಿದೆ. ಪ್ರಶಸ್ತಿಯು 25,000 ರೂ. ನಗದು, ಪರ್ಯಾಯ ಫಲಕ ಒಳಗೊಂಡಿದೆ ಎಂದರು. <br /> <br /> ಡಾ. ನ.ವಜ್ರಕುಮಾರ, ಸುಮನ್ ವಜ್ರಕುಮಾರ, ಡಾ. ಸುಭಾಸ ಜೋಶಿ ವೇದಿಕೆಯಲ್ಲಿದ್ದರು. ಜೆ.ಕೆ.ಶೆಟ್ಟಿ ಪ್ರಶಸ್ತಿ ಪತ್ರ ಓದಿದರು. ಪಾರ್ಶ್ವನಾಥ ಶೆಟ್ಟಿ ವಂದಿಸಿದರು. ಡಾ. ಜಿನ ದತ್ತ ಹಡಗಲಿ ನಿರೂಪಿಸಿದರು. ನಂತರ ಸಮರ್ಥನಂ ಸಂಸ್ಥೆಯ ವಿಕಲಚೇತನ ಮಕ್ಕಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>