ಜ 5ರಂದು ಬೆಳಿಗ್ಗೆ ಷಟ್ಸ್ಥಲ ಧ್ವಜಾರೋಹಣ, ಶಿಲಾಫಲಕದ ಅನಾವರಣ ನೆರವೇರುವುದು. ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗ–ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ವಹಿಸುವರು. ‘ಅಮೃತ ವಿರಾಗಿಣಿ’ ಸ್ಮರಣ ಸಂಚಿಕೆಯನ್ನು ಶಾಸಕ ವಿನಯ ಕುಲಕರ್ಣಿ, ಡಾ.ವೀರಣ್ಣ ರಾಜೂರ ಅವರು ಸಂಪಾದಿಸಿದ ‘ಕದಳಿಯ ಕಲ್ಪತರು’ ಸ್ಮರಣ ಸಂಪುಟವನ್ನು ಇನ್ನೋರ್ವ ಶಾಸಕ ಅರವಿಂದ ಬೆಲ್ಲದ ಬಿಡುಗಡೆ ಮಾಡಲಿದ್ದಾರೆ’ ಎಂದರು.
‘ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ ಜೋಶಿ ಮಹಾದೇವಿ ಅಕ್ಕನ ಜೀವನದ ಚಿತ್ರಗಳನ್ನು ಬಿಡುಗಡೆ ಮಾಡುವರು. ಮಧ್ಯಾಹ್ನ ನಡೆಯುವ ಮಹಿಳಾ ಗೋಷ್ಠಿಯಲ್ಲಿ ಧಾರ್ಮಿಕ ನೆಲೆಯಲ್ಲಿ ಮಹಿಳೆ ಕುರಿತು ಬೀದರನ ಅನ್ನಪೂರ್ಣ, ಕೌಟುಂಬಿಕ ನೆಲೆಯಲ್ಲಿ ಮಹಿಳೆ ಕುರಿತು ಗಿರಿಜಾ ಕಾಡಯ್ಯನಮಠ, ಸಾಹಿತ್ಯಿಕ ನೆಲೆಯಲ್ಲಿ ಮಹಿಳೆ ಕುರಿತು ಶಾರದಾ ಕಿರೇಸೂರ ಉಪನ್ಯಾಸ ನೀಡಲಿದ್ದಾರೆ’ ಎಂದು ವಿವರಿಸಿದರು. ಕಸ್ತೂರಿ ಜಿಗಜಿನ್ನಿ, ಲೀಲಾವತಿ ಬೆಲ್ಲದ, ಶಾಂತಕ್ಕ ಬೆಣ್ಣಿ, ಉಮಾದೇವಿ ಬಳ್ಳಾರಿ, ಪ್ರೇಮಾ ಹಲಕಿ, ನಳಿನಾಕ್ಷಿ, ಶಾರದಾ ಕೌದಿ ಇತರರು ಗೋಷ್ಠಿಯಲ್ಲಿದ್ದರು.