<p><strong>ಹುಬ್ಬಳ್ಳಿ: </strong>ಗಣೇಶನನ್ನು ನೀರಿಗೆ ತಳ್ಳಿ ಜನರೆಲ್ಲ ದಸರೆಯ ಮೂಡ್ನಲ್ಲಿದ್ದರೆ ಈ ನಾಗಪ್ಪ, ಗೆಳೆಯ ಗಣಪನನ್ನು ನೋಡಲು ಬಂದಿದ್ದ. ಆದರೆ ದೊಡ್ಡಹೊಟ್ಟೆಯ ಗೆಳೆಯನನ್ನು ನೋಡುವ ಉತ್ಸಾಹದಲ್ಲಿ ಎಚ್ಚರ ತಪ್ಪಿ ಬಾವಿಗೆ ಬಿದ್ದ. ನೀರಿಗೆ ಬಿದ್ದು ಪ್ರಾಣಭಯದಿಂದ ಒದ್ದಾಡುತ್ತಿದ್ದ ನಾಗಪ್ಪ ಪನ್ನಗಭೂಷಣನನ್ನು ಸ್ಮರಿಸಿದ್ದೇ ತಡ, `ಶಿವ~ ಅಲ್ಲಿ ಪ್ರತ್ಯಕ್ಷವಾಗಿಯೇ ಬಿಟ್ಟ, ಪ್ರಾಣ ಕಾಪಾಡಿದ...<br /> <br /> ಆತಂಕ, ಕುತೂಹಲ, ಭಯ, ಭಕ್ತಿ ಮುಂತಾದ ಭಾವಗಳಿಗೆ ಸಾಕ್ಷಿಯಾದ ಸುಮಾರು ಒಂದು ತಾಸು ಕಾಲ `ರಂಜನೆ~ ನೀಡಿದ ಈ ಘಟನೆ ನಡೆದದ್ದು ನಗರದ ಗುಡ್ಸ್ಶೆಡ್ ರಸ್ತೆಯಲ್ಲಿರುವ ಅಷ್ಟವಿನಾಯಕ ದೇವಸ್ಥಾನದ ಆವರಣದಲ್ಲಿ, ಶುಕ್ರವಾರ ಬೆಳಿಗ್ಗೆ.<br /> <br /> ದೇವಸ್ಥಾನದ ಸಮೀಪದಲ್ಲಿ ನಿರ್ಮಿಸಲಾದ ಬಾವಿಯಲ್ಲಿ ಈ ಬಾರಿ ಅಷ್ಟವಿನಾಯಕ ದೇವಸ್ಥಾನ ಸಮಿತಿಯವರು ಗಣೇಶನನ್ನು ವಿಸರ್ಜಿಸಿದ್ದರು. ಈ ವಿಗ್ರಹಗಳನ್ನು ತೆಗೆಯುವುದಕ್ಕೆಂದು ಬೆಳಿಗ್ಗೆ ಆಳುಗಳು ಬಾವಿಗೆ ಇಳಿದಾಗ ಸಾವಿನೊಂದಿಗೆ ಸೆಣೆಸುತ್ತಿದ್ದ ಸುಮಾರು ನಾಲ್ಕೂವರೆ ಅಡಿ ಉದ್ದದ ನಾಗಪ್ಪನನ್ನು ನೋಡಿದ್ದಾರೆ.<br /> <br /> ಹಾವು ಹಿಡಿಯುವ ಸ್ನೇಕ್ ಶಿವು ಅವರಿಗೆ ತಕ್ಷಣ ಕರೆ ಹೋಗಿದೆ. ಶಿವು ಬಂದ ನಂತರ ಅಲ್ಲಿ `ಹೈಡ್ರಾಮಾ~ ನಡೆಯಿತು. ನಿಚ್ಚಣಿಕೆ ಇರಿಸಿ 35 ಅಡಿ ಆಳದ ಬಾವಿಗಿಳಿದ ಶಿವು ಸಲೀಸಾಗಿ ನಾಗಪ್ಪನನ್ನು ಮೇಲೆತ್ತಿ ತಂದರು. ಆದರೆ ಇನ್ನೇನು ನಿಚ್ಚಣಿಕೆಯ ಕೊನೆಯ ಮೆಟ್ಟಿಲು ತುಳಿಯುವಷ್ಟರಲ್ಲಿ ಅವರ ಕೈಯಿಂದ ಜಾರಿದ ನಾಗಪ್ಪ ಮತ್ತೆ ನೀರಿಗೆ ಬಿದ್ದ.<br /> <br /> ಹಿಂಬಾಲಿಸಿದ ಶಿವುಗೆ ಈ ಬಾರಿ ನಾಗಪ್ಪ ಚೋಕ್ ಕೊಟ್ಟ. ನೀರಿನ ಒಳಗೆ, ಗಣೇಶ ಮೂರ್ತಿಯ ಕೆಳಗೆ ಅಡಗಿ ಕುಳಿತ ಆತನನ್ನು ಹಿಡಿಯಲು ಭಾರೀ ಶ್ರಮಪಡಬೇಕಾಯಿತು. ಕೊನೆಗೂ ಮಣಿದ ನಾಗಪ್ಪ `ಬಂಧಿ~ಯಾಗಿ ಮೇಲೆ ಬಂದ. <br /> <strong><br /> ಪೂಜೆ, ನಮನ:</strong> ಈ ಕಾರ್ಯಾಚರಣೆ ವೀಕ್ಷಿಸಲು ನೂರಾರು ಮಂದಿ ಸೇರಿದ್ದರು. ಅವರನ್ನು ನಿಯಂತ್ರಿಸುವುದಕ್ಕಾಗಿ ದೇವಸ್ಥಾನದ ಆವರಣದ ಗೇಟ್ ಬಂದ್ ಮಾಡಲಾಯಿತು. ಹಾವನ್ನು ರಕ್ಷಿಸಿದ ನಂತರ ದೇವಸ್ಥಾನದೊಳಗೆ ಬಿಟ್ಟು ವಿಶ್ರಾಂತಿ ನೀಡಲಾಯಿತು. ನಂತರ ಜನರಿಗೆ ಅದರ `ದರ್ಶನ~ಕ್ಕೆ ಅವಕಾಶ ನೀಡಲಾಯಿತು. ಗಣಪತಿ ವಿಗ್ರಹದ ಬಳಿ ನಾಗಪ್ಪ ಹೆಡೆಯೆತ್ತಿ ಪೋಸ್ ಕೊಟ್ಟು ಜನರ ನಮನವನ್ನು ಸ್ವೀಕರಿಸಿದ. ನಂತರ ಬಾಟ್ಲಿಯಲ್ಲಿ ಬಂಧಿಸಲಾದ ನಾಗಪ್ಪನಿಗೆ ಅರ್ಚಕರು ಪೂಜೆ ಸಲ್ಲಿಸಿದರು.<br /> <br /> ಕಾರ್ಯಾಚರಣೆಯ ನಂತರ `ಪ್ರಜಾವಾಣಿ~ ಜೊತೆ ಮಾತನಾಡಿದ ಶಿವು, ಇದು ಸ್ಪೆಕ್ಟಿಕಲ್ ಕೋಬ್ರಾ ಜಾತಿಗೆ ಸೇರಿದ ನಾಗರ ಹಾವಾಗಿದ್ದು ಕಲಘಟಗಿ ಬಳಿ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದರು.<br /> <br /> `ಇದು ಅದ್ಭುತ ಅನುಭವ. ಈ ಘಟನೆಯನ್ನು ನಾನು ಎಂದಿಗೂ ಮರೆಯಲಾರೆ. ಹಾವಿನೊಂದಿಗೆ ಸರಸವಾಡಿ ಅದನ್ನು ಹಿಡಿದ ಶಿವು ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ~ ಎಂದು ಘಟನೆಗೆ ಸಾಕ್ಷಿಯಾಗಿದ್ದ ಶರವಣನ್ ಹಾಗೂ ಶಾಂತಕುಮಾರ ಹೇಳಿದರು.<br /> <br /> `ಇಡೀ ದೃಶ್ಯಾವಳಿ ರೋಮಾಂಚಕವಾಗಿತ್ತು. ಬಾವಿಗೆ ಇಳಿದು ಏಕಾಂಗಿಯಾಗಿ ಹಾವನ್ನು ಹಿಡಿದ ಶಿವು ಅವರ ಧೈರ್ಯ ಮೆಚ್ಚತಕ್ಕದ್ದು~ ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಗುಣಶೇಖರನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಗಣೇಶನನ್ನು ನೀರಿಗೆ ತಳ್ಳಿ ಜನರೆಲ್ಲ ದಸರೆಯ ಮೂಡ್ನಲ್ಲಿದ್ದರೆ ಈ ನಾಗಪ್ಪ, ಗೆಳೆಯ ಗಣಪನನ್ನು ನೋಡಲು ಬಂದಿದ್ದ. ಆದರೆ ದೊಡ್ಡಹೊಟ್ಟೆಯ ಗೆಳೆಯನನ್ನು ನೋಡುವ ಉತ್ಸಾಹದಲ್ಲಿ ಎಚ್ಚರ ತಪ್ಪಿ ಬಾವಿಗೆ ಬಿದ್ದ. ನೀರಿಗೆ ಬಿದ್ದು ಪ್ರಾಣಭಯದಿಂದ ಒದ್ದಾಡುತ್ತಿದ್ದ ನಾಗಪ್ಪ ಪನ್ನಗಭೂಷಣನನ್ನು ಸ್ಮರಿಸಿದ್ದೇ ತಡ, `ಶಿವ~ ಅಲ್ಲಿ ಪ್ರತ್ಯಕ್ಷವಾಗಿಯೇ ಬಿಟ್ಟ, ಪ್ರಾಣ ಕಾಪಾಡಿದ...<br /> <br /> ಆತಂಕ, ಕುತೂಹಲ, ಭಯ, ಭಕ್ತಿ ಮುಂತಾದ ಭಾವಗಳಿಗೆ ಸಾಕ್ಷಿಯಾದ ಸುಮಾರು ಒಂದು ತಾಸು ಕಾಲ `ರಂಜನೆ~ ನೀಡಿದ ಈ ಘಟನೆ ನಡೆದದ್ದು ನಗರದ ಗುಡ್ಸ್ಶೆಡ್ ರಸ್ತೆಯಲ್ಲಿರುವ ಅಷ್ಟವಿನಾಯಕ ದೇವಸ್ಥಾನದ ಆವರಣದಲ್ಲಿ, ಶುಕ್ರವಾರ ಬೆಳಿಗ್ಗೆ.<br /> <br /> ದೇವಸ್ಥಾನದ ಸಮೀಪದಲ್ಲಿ ನಿರ್ಮಿಸಲಾದ ಬಾವಿಯಲ್ಲಿ ಈ ಬಾರಿ ಅಷ್ಟವಿನಾಯಕ ದೇವಸ್ಥಾನ ಸಮಿತಿಯವರು ಗಣೇಶನನ್ನು ವಿಸರ್ಜಿಸಿದ್ದರು. ಈ ವಿಗ್ರಹಗಳನ್ನು ತೆಗೆಯುವುದಕ್ಕೆಂದು ಬೆಳಿಗ್ಗೆ ಆಳುಗಳು ಬಾವಿಗೆ ಇಳಿದಾಗ ಸಾವಿನೊಂದಿಗೆ ಸೆಣೆಸುತ್ತಿದ್ದ ಸುಮಾರು ನಾಲ್ಕೂವರೆ ಅಡಿ ಉದ್ದದ ನಾಗಪ್ಪನನ್ನು ನೋಡಿದ್ದಾರೆ.<br /> <br /> ಹಾವು ಹಿಡಿಯುವ ಸ್ನೇಕ್ ಶಿವು ಅವರಿಗೆ ತಕ್ಷಣ ಕರೆ ಹೋಗಿದೆ. ಶಿವು ಬಂದ ನಂತರ ಅಲ್ಲಿ `ಹೈಡ್ರಾಮಾ~ ನಡೆಯಿತು. ನಿಚ್ಚಣಿಕೆ ಇರಿಸಿ 35 ಅಡಿ ಆಳದ ಬಾವಿಗಿಳಿದ ಶಿವು ಸಲೀಸಾಗಿ ನಾಗಪ್ಪನನ್ನು ಮೇಲೆತ್ತಿ ತಂದರು. ಆದರೆ ಇನ್ನೇನು ನಿಚ್ಚಣಿಕೆಯ ಕೊನೆಯ ಮೆಟ್ಟಿಲು ತುಳಿಯುವಷ್ಟರಲ್ಲಿ ಅವರ ಕೈಯಿಂದ ಜಾರಿದ ನಾಗಪ್ಪ ಮತ್ತೆ ನೀರಿಗೆ ಬಿದ್ದ.<br /> <br /> ಹಿಂಬಾಲಿಸಿದ ಶಿವುಗೆ ಈ ಬಾರಿ ನಾಗಪ್ಪ ಚೋಕ್ ಕೊಟ್ಟ. ನೀರಿನ ಒಳಗೆ, ಗಣೇಶ ಮೂರ್ತಿಯ ಕೆಳಗೆ ಅಡಗಿ ಕುಳಿತ ಆತನನ್ನು ಹಿಡಿಯಲು ಭಾರೀ ಶ್ರಮಪಡಬೇಕಾಯಿತು. ಕೊನೆಗೂ ಮಣಿದ ನಾಗಪ್ಪ `ಬಂಧಿ~ಯಾಗಿ ಮೇಲೆ ಬಂದ. <br /> <strong><br /> ಪೂಜೆ, ನಮನ:</strong> ಈ ಕಾರ್ಯಾಚರಣೆ ವೀಕ್ಷಿಸಲು ನೂರಾರು ಮಂದಿ ಸೇರಿದ್ದರು. ಅವರನ್ನು ನಿಯಂತ್ರಿಸುವುದಕ್ಕಾಗಿ ದೇವಸ್ಥಾನದ ಆವರಣದ ಗೇಟ್ ಬಂದ್ ಮಾಡಲಾಯಿತು. ಹಾವನ್ನು ರಕ್ಷಿಸಿದ ನಂತರ ದೇವಸ್ಥಾನದೊಳಗೆ ಬಿಟ್ಟು ವಿಶ್ರಾಂತಿ ನೀಡಲಾಯಿತು. ನಂತರ ಜನರಿಗೆ ಅದರ `ದರ್ಶನ~ಕ್ಕೆ ಅವಕಾಶ ನೀಡಲಾಯಿತು. ಗಣಪತಿ ವಿಗ್ರಹದ ಬಳಿ ನಾಗಪ್ಪ ಹೆಡೆಯೆತ್ತಿ ಪೋಸ್ ಕೊಟ್ಟು ಜನರ ನಮನವನ್ನು ಸ್ವೀಕರಿಸಿದ. ನಂತರ ಬಾಟ್ಲಿಯಲ್ಲಿ ಬಂಧಿಸಲಾದ ನಾಗಪ್ಪನಿಗೆ ಅರ್ಚಕರು ಪೂಜೆ ಸಲ್ಲಿಸಿದರು.<br /> <br /> ಕಾರ್ಯಾಚರಣೆಯ ನಂತರ `ಪ್ರಜಾವಾಣಿ~ ಜೊತೆ ಮಾತನಾಡಿದ ಶಿವು, ಇದು ಸ್ಪೆಕ್ಟಿಕಲ್ ಕೋಬ್ರಾ ಜಾತಿಗೆ ಸೇರಿದ ನಾಗರ ಹಾವಾಗಿದ್ದು ಕಲಘಟಗಿ ಬಳಿ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದರು.<br /> <br /> `ಇದು ಅದ್ಭುತ ಅನುಭವ. ಈ ಘಟನೆಯನ್ನು ನಾನು ಎಂದಿಗೂ ಮರೆಯಲಾರೆ. ಹಾವಿನೊಂದಿಗೆ ಸರಸವಾಡಿ ಅದನ್ನು ಹಿಡಿದ ಶಿವು ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ~ ಎಂದು ಘಟನೆಗೆ ಸಾಕ್ಷಿಯಾಗಿದ್ದ ಶರವಣನ್ ಹಾಗೂ ಶಾಂತಕುಮಾರ ಹೇಳಿದರು.<br /> <br /> `ಇಡೀ ದೃಶ್ಯಾವಳಿ ರೋಮಾಂಚಕವಾಗಿತ್ತು. ಬಾವಿಗೆ ಇಳಿದು ಏಕಾಂಗಿಯಾಗಿ ಹಾವನ್ನು ಹಿಡಿದ ಶಿವು ಅವರ ಧೈರ್ಯ ಮೆಚ್ಚತಕ್ಕದ್ದು~ ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಗುಣಶೇಖರನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>