<p>ಹುಬ್ಬಳ್ಳಿ: ಪರಿಸರ ಸಂರಕ್ಷಣೆ, ಜಾಗತಿಕ ತಾಪ ಮಾನ, ಕಲುಷಿತಗೊಂಡ ವಾತಾ ವರಣ ಕುರಿತು ಗಂಟೆಗಟ್ಟಲೇ ಭಾಷಣ ಮಾಡುವ ಜನರು ನಮ್ಮ ದೇಶದಲ್ಲಿ ಸಾಕಷ್ಟು ಸಿಗುತ್ತಾರೆ. ಆದರೆ, ಪರಿಸರ ಜಾಗೃತಿಗಾಗಿ ನಿರಂತರ ಹೋರಾಟ ಮಾಡುವುದು ಲಕ್ಷದಲ್ಲಿ ಒಬ್ಬಿಬ್ಬರಿಗೆ ಮಾತ್ರ ಸಾಧ್ಯ. ಕಳೆದ ಆರು ವರ್ಷದಿಂದ ಸೈಕಲ್ ಮೇಲೆಯೇ ದೇಶ ಸಂಚಾರ ಮಾಡುತ್ತಿರುವ ವ್ಯಕ್ತಿಯೊಬ್ಬ ಪರಿಸರ ಜಾಗೃತಿಯೇ ನನ್ನ ಉಸಿರು ಎಂದು ಕೊಂಡು ಮುನ್ನಡೆದಿದ್ದಾರೆ. ಆ ವ್ಯಕ್ತಿಯೇ ತಮಿಳುನಾಡಿನ ನಾಮಕಲ್ನ ಅನ್ಬು ಚಾರ್ಲ್ಸ್.<br /> <br /> `ಕಲುಷಿತಗೊಳ್ಳುತ್ತಿರುವ ಪರಿಸರ ವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸ ಲಿದೆ~ ಎಂಬ ಧ್ಯೇಯ ವಾಕ್ಯದೊಂದಿಗೆ ನಾಮಕಲ್ದಿಂದ ದೇಶ ಸಂಚಾರ ಆರಂಭಿಸಿದ ಪರಿಸರವಾದಿ ಇವರು. 54 ವರ್ಷ ವಯಸ್ಸಿನ ಅವಿವಾಹಿತರಾದ ಅನ್ಬು ಚಾರ್ಲ್ಸ್, ಈಗಾಗಲೇ ಕರ್ನಾ ಟಕ ಸೇರಿದಂತೆ ದೇಶದ 20 ರಾಜ್ಯದಲ್ಲಿ ಜಾಗೃತಿ ಯಾತ್ರೆ ನಡೆಸಿದ್ದಾರೆ. ಮಂಗಳ ವಾರ ನಗರಕ್ಕೆ ಆಗಮಿಸಿದ್ದ ಅವರು `ಪ್ರಜಾವಾಣಿ~ ಜೊತೆ ತಮ್ಮ ಯಾತ್ರೆಯ ಉದ್ದೇಶವನ್ನು ಹಂಚಿ ಕೊಂಡರು.<br /> <br /> ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲ ಯದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಕೆಲ ಕಾಲ ಖಾಸಗಿ ಪ್ರಾಥ ಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2005ರಲ್ಲಿ ದಕ್ಷಿಣ ಭಾರತ ದಲ್ಲಿ ಅಪ್ಪಳಿಸಿದ ಭೀಕರ ಸುನಾಮಿ ಅವರ ಜೀವನದ ಗತಿಯನ್ನೇ ಬದ ಲಿಸಿತು. <br /> <br /> ಸುನಾಮಿಯಂತಹ ಭಯಾನಕ ಘಟನೆಗಳು ನಡೆಯಲು ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಾಳಿ ಕಾರಣ ಎಂಬುದನ್ನರಿತು, ಪರಿಸರ ರಕ್ಷ ಣೆಗೆ ಕೈಲಾದ ಮಟ್ಟಿಗೆ ಏನನ್ನಾದರೂ ಮಾಡಬೇಕೆಂಬ ಸದುದ್ದೇಶದಿಂದ ಸೈಕಲ್ ಮೇಲೆ ದೇಶ ಸಂಚಾರ ಆರಂಭಿ ಸಿರುವುದಾಗಿ ಅವರು ತಿಳಿಸಿದರು.<br /> <br /> 20 ರಾಜ್ಯಗಳಲ್ಲಿ ಸಂಚಾರ: 2005 ರಲ್ಲಿ ತಮಿಳು ನಾಡಿನ ವಾಮಗಲ್ದಿಂದ ದೇಶ ಸಂಚಾರ ಆರಂಭಿ ಸಿದ ಚಾರ್ಲ್ಸ್, ಈಗಾಗಲೇ ಕೇರಳ, ಕರ್ನಾಟಕದ ಕರಾವಳಿ ಭಾಗ, ಮಹಾರಾಷ್ಟ್ರ, ಗುಜ ರಾತ್, ದಿವ್ ದಮನ್, ರಾಜಸ್ತಾನ, ನವದೆಹಲಿ, ಪಂಜಾಬ್, ಉತ್ತರ ಪ್ರದೇಶ, ನೇಪಾಳ, ಪಂಜಾಬ್, ಹರಿ ಯಾಣ, ಛತ್ತೀಸಗಡ, ಜಾರ್ಖಂಡ, ಬಿಹಾರ, ಪಶ್ಚಿಮ ಬಂಗಾಲ, ಒಡಿಶಾ, ಆಂಧ್ರಪ್ರದೇಶ, ಪಾಂಡಿಚೇರಿ, ಗೋವಾ ರಾಜ್ಯಗಳನ್ನು ಸುತ್ತಿದ್ದು, ಈಗ ಉತ್ತರ ಕರ್ನಾಟಕ್ಕೆ ಆಗಮಿಸಿದ್ದಾರೆ. <br /> <br /> 7 ಸಾವಿರ ಉಪನ್ಯಾಸ: ಕೇವಲ ಸೈಕಲ್ ಮೇಲೆ ಸಂಚಾರ ಮಾಡುವು ದಷ್ಟೇ ನನ್ನ ಗುರಿಯಲ್ಲ. ಪರಿಸರಕ್ಕೆ ಅನು ಕೂಲವಾಗಲಿರುವ ಸೈಕಲ್ ಬಳಕೆಯ ಪ್ರಾಮುಖ್ಯತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರಿಸರ ಮಹತ್ವ ಕುರಿತು ತಿಳಿಸುತ್ತೇನೆ. ಈಗಾಗಲೇ ದೇಶದ ವಿವಿಧ ಶಾಲೆ-ಕಾಲೇಜುಗಳ ಮಕ್ಕಳನ್ನು ಭೇಟಿ ಮಾಡಿ 7 ಸಾವಿರ ಪರಿಸರ ರಕ್ಷಣೆ ಬಗ್ಗೆ ಉಪನ್ಯಾಸ ನೀಡಿದ್ದೇನೆ ಎಂದು ಅವರು ತಿಳಿಸಿದರು.<br /> <br /> ಅಡೆತಡೆ ಸಾಮಾನ್ಯ: `ಸೈಕಲ್ ಮೇಲೆ ಪ್ರಯಾಣ ಮಾಡುವಾಗ ಅಡೆತಡೆಗಳು ಸಾಮಾನ್ಯ. ಇಲ್ಲಿ ಯವರೆಗೆ ಬಂದ ತೊಂದರೆಗಳನ್ನು ಎದೆಗುಂದದೇ ಎದುರಿಸಿದ್ದೇನೆ. ಮುಂದೆಯೂ ಎದು ರಿಸುತ್ತೇನೆ ಎಂಬ ಧೈರ್ಯ ನನ್ನಲ್ಲಿದೆ. ಒಮ್ಮೆ ಉತ್ತರ ಪ್ರದೇಶ ಹಾಗೂ ನೇಪಾಳ ಗಡಿಯಲ್ಲಿ ಹೊರಟಾಗ ನಕ್ಸ ಲ್ರ ಕೈಗೆ ಸಿಕ್ಕುಬಿದ್ದೆ. ಆಗ ನಾನೊಬ್ಬ ಪರಿಸರವಾದಿ, ಸೈಕಲ್ ಮೇಲೆ ದೇಶ ಸಂಚಾರ ಮಾಡುತ್ತಿದ್ದೇನೆ ಎಂದು ಹೇಳಿದರೂ ಕೇಳಲಿಲ್ಲ. <br /> <br /> ತಮ್ಮನ್ನು ಸಿಐಡಿ ಅಧಿಕಾರಿ ಎಂದುಕೊಂಡು ತಮ್ಮ ಜತೆ ಕಾಡಿನಲ್ಲಿ ಕರೆದೊಯ್ದು, ಕಾಲಿಗೆ ಚೈನು ಕಟ್ಟಿ ಹದಿನೈದು ದಿನ ಬಂಧಿಸಿಟ್ಟಿದ್ದರು. ಒಂದು ದಿನ ನನ್ನ ಬಗ್ಗೆ ಟಿವಿಯಲ್ಲಿ ವರದಿ ಬಂದಿತು. ಅದನ್ನು ನೋಡಿದ ಮೇಲೆ ನನ್ನನ್ನು ಬಿಡುಗಡೆಗೊಳಿಸಿದರು ಎಂದು ತಮಗಾದ ಕಹಿ ಅನುಭವವನ್ನು ವಿವರಿಸಿದರು.<br /> <br /> `ಈ ಸಂಚಾರ ಎಲ್ಲಿಯವರೆಗೆ ಎಂಬುದು ಗೊತ್ತಿಲ್ಲ. ಇಲ್ಲಿಯವರೆಗೆ 42,500 ಕಿ.ಮೀ. ಗಿಂತ ಹೆಚ್ಚು ಪ್ರಯಾಣ ಮಾಡಿದ್ದೇನೆ. ದೇವರು ನನ್ನ ದೇಹದಲ್ಲಿ ಎಲ್ಲಿಯವರೆಗೆ ಶಕ್ತಿ ನೀಡುತ್ತಾನೆಯೋ ಅಲ್ಲಿಯವರೆಗೆ ಅಂದರೆ, ನನ್ನಲ್ಲಿ ಉಸಿರು ಇರುವ ವರೆಗೆ ಈ ಜಾಗೃತಿ ಕಾರ್ಯಕ್ರಮ ನಡೆಸುವೆ ಎಂದು ಚಾರ್ಲ್ಸ್ ತಿಳಿಸಿದರು.<br /> <br /> ಹಿತ ಹಾಗೂ ಮಿತ ಮಾತು, ಎದುರಿಗೆ ಬಂದವ ರಿಗೆಲ್ಲಾ ಅನ್ಬು ಕೊಡುವ ಗೌರವ ನೋಡುಗರ ಮನಸ್ಸಿನಲ್ಲಿ ಸಂತೋಷವನ್ನು ಉಂಟು ಮಾಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಪರಿಸರ ಸಂರಕ್ಷಣೆ, ಜಾಗತಿಕ ತಾಪ ಮಾನ, ಕಲುಷಿತಗೊಂಡ ವಾತಾ ವರಣ ಕುರಿತು ಗಂಟೆಗಟ್ಟಲೇ ಭಾಷಣ ಮಾಡುವ ಜನರು ನಮ್ಮ ದೇಶದಲ್ಲಿ ಸಾಕಷ್ಟು ಸಿಗುತ್ತಾರೆ. ಆದರೆ, ಪರಿಸರ ಜಾಗೃತಿಗಾಗಿ ನಿರಂತರ ಹೋರಾಟ ಮಾಡುವುದು ಲಕ್ಷದಲ್ಲಿ ಒಬ್ಬಿಬ್ಬರಿಗೆ ಮಾತ್ರ ಸಾಧ್ಯ. ಕಳೆದ ಆರು ವರ್ಷದಿಂದ ಸೈಕಲ್ ಮೇಲೆಯೇ ದೇಶ ಸಂಚಾರ ಮಾಡುತ್ತಿರುವ ವ್ಯಕ್ತಿಯೊಬ್ಬ ಪರಿಸರ ಜಾಗೃತಿಯೇ ನನ್ನ ಉಸಿರು ಎಂದು ಕೊಂಡು ಮುನ್ನಡೆದಿದ್ದಾರೆ. ಆ ವ್ಯಕ್ತಿಯೇ ತಮಿಳುನಾಡಿನ ನಾಮಕಲ್ನ ಅನ್ಬು ಚಾರ್ಲ್ಸ್.<br /> <br /> `ಕಲುಷಿತಗೊಳ್ಳುತ್ತಿರುವ ಪರಿಸರ ವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸ ಲಿದೆ~ ಎಂಬ ಧ್ಯೇಯ ವಾಕ್ಯದೊಂದಿಗೆ ನಾಮಕಲ್ದಿಂದ ದೇಶ ಸಂಚಾರ ಆರಂಭಿಸಿದ ಪರಿಸರವಾದಿ ಇವರು. 54 ವರ್ಷ ವಯಸ್ಸಿನ ಅವಿವಾಹಿತರಾದ ಅನ್ಬು ಚಾರ್ಲ್ಸ್, ಈಗಾಗಲೇ ಕರ್ನಾ ಟಕ ಸೇರಿದಂತೆ ದೇಶದ 20 ರಾಜ್ಯದಲ್ಲಿ ಜಾಗೃತಿ ಯಾತ್ರೆ ನಡೆಸಿದ್ದಾರೆ. ಮಂಗಳ ವಾರ ನಗರಕ್ಕೆ ಆಗಮಿಸಿದ್ದ ಅವರು `ಪ್ರಜಾವಾಣಿ~ ಜೊತೆ ತಮ್ಮ ಯಾತ್ರೆಯ ಉದ್ದೇಶವನ್ನು ಹಂಚಿ ಕೊಂಡರು.<br /> <br /> ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲ ಯದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಕೆಲ ಕಾಲ ಖಾಸಗಿ ಪ್ರಾಥ ಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2005ರಲ್ಲಿ ದಕ್ಷಿಣ ಭಾರತ ದಲ್ಲಿ ಅಪ್ಪಳಿಸಿದ ಭೀಕರ ಸುನಾಮಿ ಅವರ ಜೀವನದ ಗತಿಯನ್ನೇ ಬದ ಲಿಸಿತು. <br /> <br /> ಸುನಾಮಿಯಂತಹ ಭಯಾನಕ ಘಟನೆಗಳು ನಡೆಯಲು ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಾಳಿ ಕಾರಣ ಎಂಬುದನ್ನರಿತು, ಪರಿಸರ ರಕ್ಷ ಣೆಗೆ ಕೈಲಾದ ಮಟ್ಟಿಗೆ ಏನನ್ನಾದರೂ ಮಾಡಬೇಕೆಂಬ ಸದುದ್ದೇಶದಿಂದ ಸೈಕಲ್ ಮೇಲೆ ದೇಶ ಸಂಚಾರ ಆರಂಭಿ ಸಿರುವುದಾಗಿ ಅವರು ತಿಳಿಸಿದರು.<br /> <br /> 20 ರಾಜ್ಯಗಳಲ್ಲಿ ಸಂಚಾರ: 2005 ರಲ್ಲಿ ತಮಿಳು ನಾಡಿನ ವಾಮಗಲ್ದಿಂದ ದೇಶ ಸಂಚಾರ ಆರಂಭಿ ಸಿದ ಚಾರ್ಲ್ಸ್, ಈಗಾಗಲೇ ಕೇರಳ, ಕರ್ನಾಟಕದ ಕರಾವಳಿ ಭಾಗ, ಮಹಾರಾಷ್ಟ್ರ, ಗುಜ ರಾತ್, ದಿವ್ ದಮನ್, ರಾಜಸ್ತಾನ, ನವದೆಹಲಿ, ಪಂಜಾಬ್, ಉತ್ತರ ಪ್ರದೇಶ, ನೇಪಾಳ, ಪಂಜಾಬ್, ಹರಿ ಯಾಣ, ಛತ್ತೀಸಗಡ, ಜಾರ್ಖಂಡ, ಬಿಹಾರ, ಪಶ್ಚಿಮ ಬಂಗಾಲ, ಒಡಿಶಾ, ಆಂಧ್ರಪ್ರದೇಶ, ಪಾಂಡಿಚೇರಿ, ಗೋವಾ ರಾಜ್ಯಗಳನ್ನು ಸುತ್ತಿದ್ದು, ಈಗ ಉತ್ತರ ಕರ್ನಾಟಕ್ಕೆ ಆಗಮಿಸಿದ್ದಾರೆ. <br /> <br /> 7 ಸಾವಿರ ಉಪನ್ಯಾಸ: ಕೇವಲ ಸೈಕಲ್ ಮೇಲೆ ಸಂಚಾರ ಮಾಡುವು ದಷ್ಟೇ ನನ್ನ ಗುರಿಯಲ್ಲ. ಪರಿಸರಕ್ಕೆ ಅನು ಕೂಲವಾಗಲಿರುವ ಸೈಕಲ್ ಬಳಕೆಯ ಪ್ರಾಮುಖ್ಯತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರಿಸರ ಮಹತ್ವ ಕುರಿತು ತಿಳಿಸುತ್ತೇನೆ. ಈಗಾಗಲೇ ದೇಶದ ವಿವಿಧ ಶಾಲೆ-ಕಾಲೇಜುಗಳ ಮಕ್ಕಳನ್ನು ಭೇಟಿ ಮಾಡಿ 7 ಸಾವಿರ ಪರಿಸರ ರಕ್ಷಣೆ ಬಗ್ಗೆ ಉಪನ್ಯಾಸ ನೀಡಿದ್ದೇನೆ ಎಂದು ಅವರು ತಿಳಿಸಿದರು.<br /> <br /> ಅಡೆತಡೆ ಸಾಮಾನ್ಯ: `ಸೈಕಲ್ ಮೇಲೆ ಪ್ರಯಾಣ ಮಾಡುವಾಗ ಅಡೆತಡೆಗಳು ಸಾಮಾನ್ಯ. ಇಲ್ಲಿ ಯವರೆಗೆ ಬಂದ ತೊಂದರೆಗಳನ್ನು ಎದೆಗುಂದದೇ ಎದುರಿಸಿದ್ದೇನೆ. ಮುಂದೆಯೂ ಎದು ರಿಸುತ್ತೇನೆ ಎಂಬ ಧೈರ್ಯ ನನ್ನಲ್ಲಿದೆ. ಒಮ್ಮೆ ಉತ್ತರ ಪ್ರದೇಶ ಹಾಗೂ ನೇಪಾಳ ಗಡಿಯಲ್ಲಿ ಹೊರಟಾಗ ನಕ್ಸ ಲ್ರ ಕೈಗೆ ಸಿಕ್ಕುಬಿದ್ದೆ. ಆಗ ನಾನೊಬ್ಬ ಪರಿಸರವಾದಿ, ಸೈಕಲ್ ಮೇಲೆ ದೇಶ ಸಂಚಾರ ಮಾಡುತ್ತಿದ್ದೇನೆ ಎಂದು ಹೇಳಿದರೂ ಕೇಳಲಿಲ್ಲ. <br /> <br /> ತಮ್ಮನ್ನು ಸಿಐಡಿ ಅಧಿಕಾರಿ ಎಂದುಕೊಂಡು ತಮ್ಮ ಜತೆ ಕಾಡಿನಲ್ಲಿ ಕರೆದೊಯ್ದು, ಕಾಲಿಗೆ ಚೈನು ಕಟ್ಟಿ ಹದಿನೈದು ದಿನ ಬಂಧಿಸಿಟ್ಟಿದ್ದರು. ಒಂದು ದಿನ ನನ್ನ ಬಗ್ಗೆ ಟಿವಿಯಲ್ಲಿ ವರದಿ ಬಂದಿತು. ಅದನ್ನು ನೋಡಿದ ಮೇಲೆ ನನ್ನನ್ನು ಬಿಡುಗಡೆಗೊಳಿಸಿದರು ಎಂದು ತಮಗಾದ ಕಹಿ ಅನುಭವವನ್ನು ವಿವರಿಸಿದರು.<br /> <br /> `ಈ ಸಂಚಾರ ಎಲ್ಲಿಯವರೆಗೆ ಎಂಬುದು ಗೊತ್ತಿಲ್ಲ. ಇಲ್ಲಿಯವರೆಗೆ 42,500 ಕಿ.ಮೀ. ಗಿಂತ ಹೆಚ್ಚು ಪ್ರಯಾಣ ಮಾಡಿದ್ದೇನೆ. ದೇವರು ನನ್ನ ದೇಹದಲ್ಲಿ ಎಲ್ಲಿಯವರೆಗೆ ಶಕ್ತಿ ನೀಡುತ್ತಾನೆಯೋ ಅಲ್ಲಿಯವರೆಗೆ ಅಂದರೆ, ನನ್ನಲ್ಲಿ ಉಸಿರು ಇರುವ ವರೆಗೆ ಈ ಜಾಗೃತಿ ಕಾರ್ಯಕ್ರಮ ನಡೆಸುವೆ ಎಂದು ಚಾರ್ಲ್ಸ್ ತಿಳಿಸಿದರು.<br /> <br /> ಹಿತ ಹಾಗೂ ಮಿತ ಮಾತು, ಎದುರಿಗೆ ಬಂದವ ರಿಗೆಲ್ಲಾ ಅನ್ಬು ಕೊಡುವ ಗೌರವ ನೋಡುಗರ ಮನಸ್ಸಿನಲ್ಲಿ ಸಂತೋಷವನ್ನು ಉಂಟು ಮಾಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>