ಹೆಬ್ಬಳ್ಳಿ (ಧಾರವಾಡ): ಇಲ್ಲಿಯ ಗ್ರಾಮ ಪಂಚಾಯಿ ತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಗಾಗಿ ಮಂಗಳವಾರ ನಡೆದ ಚುನಾವಣೆ ವೇಳೆ, ಗ್ರಾ.ಪಂ. ಸದಸ್ಯರ ಒಂದು ಬಣ ಚುನಾವಣಾ ಪ್ರಕ್ರಿಯೆ ಯನ್ನು ಮುಂದಕ್ಕೆ ಹಾಕಬೇಕು ಎಂದು ಒತ್ತಾಯಿಸಿದ ಸಂದ ರ್ಭದಲ್ಲಿ ನಡೆದ ಘರ್ಷಣೆ ಯಲ್ಲಿ ಚುನಾವಣಾಧಿಕಾರಿಯ ಕಾರಿಗೆ ಕಲ್ಲು ಬಿದ್ದು ಗಾಜು ಗಳು ಪುಡಿಪುಡಿಯಾದವು.
ಕೆಲ ಹೊತ್ತು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಘಟನೆ ವಿವರ: ಕಡಿಮೆ ಸದಸ್ಯ ಬಲ ಹೊಂದಿದ್ದ ಬಸವರಾಜ ತಂಬಾಕದ, ರವಿ ಸಾದರ, ನಿರ್ಮಲಾ ಅವರನ್ನು ಒಳಗೊಂಡ ಬಣ ತಮಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವ ಬಗ್ಗೆ ನೋಟಿಸ್ ನೀಡಿಲ್ಲ ಎಂದು ಚುನಾವಣಾಧಿಕಾರಿ ಆಗಿ ಕಾರ್ಯನಿರ್ವಹಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಐ.ಎಸ್.ಸಾಣಿಕೊಪ್ಪ ಅವರಿಗೆ ತಕರಾರು ತೆಗೆದರು.