ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.ಸಿದ್ದರಾಮಯ್ಯ ಇನ್ನೆಂದು ರಾಜ್ಯದ ಮುಖ್ಯಮಂತ್ರಿ ಆಗುವುದಿಲ್ಲ. 2012–13ರಲ್ಲಿ ಬಿಜೆಪಿ ಒಡೆಯದಿದ್ದರೆ ಸಿದ್ದರಾಮಯ್ಯ ಎಲ್ಲಿ ಮುಖ್ಯಮಂತ್ರಿಯಾಗುತ್ತಿದ್ದರು. ಮತಗಳ ವಿಭಜನೆಯಿಂದ ಅವರಿಗೆ ಅಂತಹ ಅವಕಾಶ ದೊರೆಯಿತು. ಈಗ ತಿರುಕನ ಕನಸು ಕಾಣುತ್ತಿದ್ದಾರೆ. ಹಿಂದುಳಿದ ವರ್ಗದ ಜನರ ಶಾಪ ಸಿದ್ದರಾಮಯ್ಯರ ಮೇಲಿದೆ. ಅವರಿಗೆ ಮತ್ತೆ ಅಂಥ ಅವಕಾಶ ಸಿಗುವುದಿಲ್ಲ ಎಂದು ಕುಹಕವಾಡಿದರು.