ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಶೈಕ್ಷಣಿಕ ನೆರವು ನಿಧಿ

ವಿದ್ಯಾರ್ಥಿಗಳ ಅನಿಸಿಕೆ
Last Updated 24 ಮೇ 2018, 19:40 IST
ಅಕ್ಷರ ಗಾತ್ರ

ಸೇವೆ ಮರೆಯಲಾಗದು

‘ಪ್ರಜಾವಾಣಿ’ಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ತಂದೆ ಅಪಘಾತದಲ್ಲಿ ಗಾಯಗೊಂಡು ನಿತ್ರಾಣಗೊಂಡಿದ್ದು, ತಾಯಿ ನಮ್ಮನ್ನು ಸಲಹುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 96 ರಷ್ಟು ಅಂಕ ಪಡೆದ ವಿಶ್ವಾಸದ ಮೇಲೆ ಅರ್ಜಿ ಹಾಕಿದೆ. ‘ಪ್ರಜಾವಾಣಿ’ಯವರು ತಕ್ಷಣ ಸ್ಪಂದಿಸಿ ಆರ್ಥಿಕ ನೆರವು ನೀಡಿದರು. ಬೀದರ್‌ನ ಮಾತಾ ಮಾಣಿಕೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಲ್ಕ ಪಾವತಿಸಿ ಪ್ರವೇಶ ಪಡೆದೆ. ಪಿಯುಸಿ ಮೊದಲ ವರ್ಷದಲ್ಲಿ ಶೇ 95ರಷ್ಟು ಅಂಕ ಪಡೆದಿದ್ದೇನೆ. ಉನ್ನತ ವ್ಯಾಸಂಗ ಮಾಡುವ ಮೂಲಕ ಕುಟುಂಬಕ್ಕೆ ಆಧಾರಸ್ತಂಭವಾಗುವ ಗುರಿ ಹೊಂದಿದ್ದೇನೆ. ಕಷ್ಟಕಾಲದಲ್ಲಿ ನೆರವಾದ ಪತ್ರಿಕೆಯ ಸಾಮಾಜಿಕ ಸೇವೆಯನ್ನು ಮರೆಯಲಾಗದು.

–ರೇವಣಸಿದ್ದಯ್ಯ ಸಂಗಯ್ಯ ಮಠಪತಿ, ಬೇಮಳಖೇಡ, ತಾಲ್ಲೂಕು ಚಿಟಗುಪ್ಪ, ಬೀದರ್‌ ಜಿಲ್ಲೆ

ಗುರಿ ತಲುಪಲು ನೆರವು

ಗೋಣಿಕೊಪ್ಪಲು ವಿದ್ಯಾನಿಕೇತನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದೇನೆ. ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ‘ಪ್ರಜಾವಾಣಿ’ ನೀಡಿದ ಸ್ಕಾಲರ್‌ಷಿಪ್‌ ಹಣದಿಂದಲೇ ಕಾಲೇಜಿನ ಪ್ರವೇಶ ಶುಲ್ಕ ಪಾವತಿಸಿದೆ. ಸಂಕಷ್ಟದ ವೇಳೆ ನನಗೆ ಈ ಹಣ ದೊರೆಯಿತು. ನೆರವನ್ನು ನಾನೆಂದು ಮರೆಯುವುದಿಲ್ಲ. ಬಡತನದ ಕಾರಣಕ್ಕೆ ಪ್ರತಿಭಾನ್ವಿತರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಸ್ಥಿತಿ ಇಂದಿಗೂ ಇದೆ. ಆದರೆ, ‘ಪ್ರಜಾವಾಣಿ’ ಪತ್ರಿಕೆಯು ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ.

–ಪಿ.ಕೆ. ನಿರತಾ, ನೀರಕಡಿ ಗ್ರಾಮ, ಕುಟ್ಟಾ ಅಂಚೆ, ಕೊಡಗು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT