‘ಪ್ರಜಾವಾಣಿ’ಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ತಂದೆ ಅಪಘಾತದಲ್ಲಿ ಗಾಯಗೊಂಡು ನಿತ್ರಾಣಗೊಂಡಿದ್ದು, ತಾಯಿ ನಮ್ಮನ್ನು ಸಲಹುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 96 ರಷ್ಟು ಅಂಕ ಪಡೆದ ವಿಶ್ವಾಸದ ಮೇಲೆ ಅರ್ಜಿ ಹಾಕಿದೆ. ‘ಪ್ರಜಾವಾಣಿ’ಯವರು ತಕ್ಷಣ ಸ್ಪಂದಿಸಿ ಆರ್ಥಿಕ ನೆರವು ನೀಡಿದರು. ಬೀದರ್ನ ಮಾತಾ ಮಾಣಿಕೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಲ್ಕ ಪಾವತಿಸಿ ಪ್ರವೇಶ ಪಡೆದೆ. ಪಿಯುಸಿ ಮೊದಲ ವರ್ಷದಲ್ಲಿ ಶೇ 95ರಷ್ಟು ಅಂಕ ಪಡೆದಿದ್ದೇನೆ. ಉನ್ನತ ವ್ಯಾಸಂಗ ಮಾಡುವ ಮೂಲಕ ಕುಟುಂಬಕ್ಕೆ ಆಧಾರಸ್ತಂಭವಾಗುವ ಗುರಿ ಹೊಂದಿದ್ದೇನೆ. ಕಷ್ಟಕಾಲದಲ್ಲಿ ನೆರವಾದ ಪತ್ರಿಕೆಯ ಸಾಮಾಜಿಕ ಸೇವೆಯನ್ನು ಮರೆಯಲಾಗದು.