ಕೃಷಿ ಸಂಶೋಧಕ ಸಿ.ಎಂ ರಫೀ ಮಾತನಾಡಿ, ಪ್ರತಿ ವರ್ಷ ಬೂದು ರೋಗ ಬರುತಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಚಿಬ್ಬು ರೋಗ ಕಾಣಿಸಿಕೊಂಡಿದ್ದು, ಇದು ಶಿಲೀಂಧ್ರ ರೋಗ. ಈ ರೋಗವು ಮೊದಲು ಎಲೆಗಳ ಮೇಲೆ ಚುಕ್ಕಿ ಕುಳಿತು ನಂತರ ತುಂತುರು ಮಳೆಗೆ ಹಣ್ಣಿನಿಂದ ಹಣ್ಣಿಗೆ ಹರಡುತ್ತದೆ. ಮೆಣಸಿನಕಾಯಿ ಬೆಳೆಯೂ ಸಂಪೂರ್ಣ ನಾಶವಾಗಿದ್ದು ಮುಂದಿನ ಬೆಳೆಗೆ ಹರಡದಂತೆ ತಡೆಗಟ್ಟಲು ರೋಟರ್ ಹೊಡಿಸುವುದು ಉತ್ತಮ ಎಂದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶೈಲೇಂದ್ರ ಬಿರಾದರ, ಸಹಾಯಕ ಕೃಷಿ ಅಧಿಕಾರಿ ಎಂ.ಬಿ ಸುಂಕಾಪುರ, ರೈತರಾದ ಬುದ್ಧಪ್ಪ ಮಾಡಳ್ಳಿ, ಮಹೇಶ ಮಟ್ಟಿ, ಶಂಕ್ರಪ್ಪ ಮಾಡಳ್ಳಿ, ಮಾಹಾಂತಪ್ಪ ಭೋಳನವರ ಇದ್ದರು.